Thursday, June 4, 2026
Thursday, June 4, 2026

ದೆಹಲಿಯಿಂದ ನೈನಿತಾಲ್‌ಗೆ ಈಗ 3 ಗಂಟೆ ಬೇಗ ಹೋಗ್ಬೋದು!

ಈಗ ದೆಹಲಿ ಮತ್ತು ನೈನಿತಾಲ್ ನಡುವಿನ ರಸ್ತೆ ಸಂಪರ್ಕವನ್ನು ಸುಧಾರಿಸಲು ಹೊಸದಾಗಿ 'ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ' ಯೋಜನೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಉತ್ತರಾಖಂಡದ ಅತ್ಯಂತ ಪ್ರಸಿದ್ಧ ಮತ್ತು ಸುಂದರ ಸರೋವರಗಳ ನಗರಿ 'ನೈನಿತಾಲ್'ಗೆ ಪ್ರಯಾಣಿಸುವ ದೆಹಲಿ ಮತ್ತು ಎನ್‌ಸಿ‌ಆರ್ ಪ್ರವಾಸಿಗರಿಗೆ ಕೇಂದ್ರ ಸರಕಾರವು ಮತ್ತೊಂದು ಮಹತ್ತರ ಮೂಲಸೌಕರ್ಯ ಕೊಡುಗೆಯನ್ನು ನೀಡಲು ಸಜ್ಜಾಗಿದೆ.

ಇತ್ತೀಚೆಗಷ್ಟೇ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಯಶಸ್ವಿಯಾಗಿ ಉದ್ಘಾಟನೆಗೊಂಡ ಬೆನ್ನಲ್ಲೇ, ಈಗ ದೆಹಲಿ ಮತ್ತು ನೈನಿತಾಲ್ ನಡುವಿನ ರಸ್ತೆ ಸಂಪರ್ಕವನ್ನು ಸುಧಾರಿಸಲು ಹೊಸದಾಗಿ 'ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ' ಯೋಜನೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ಅತ್ಯಾಧುನಿಕ ಹೆದ್ದಾರಿಯು ದೆಹಲಿ ಮತ್ತು ಕುಮಾಂವ್ ವಲಯದ ಪ್ರವೇಶ ದ್ವಾರವಾದ ಹಲ್ದ್ವಾನಿ ನಡುವಿನ ಪ್ರಯಾಣದ ಸಮಯವನ್ನು 3 ಗಂಟೆಗಿಂತಲೂ ಹೆಚ್ಚು ಕಡಿತಗೊಳಿಸಲಿದೆ.

ಇದನ್ನೂ ಓದಿ: ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ವೇ ಏಪ್ರಿಲ್‌ನಲ್ಲಿ ಪ್ರಾರಂಭ

ಪ್ರಸ್ತುತ ದೆಹಲಿಯಿಂದ ನೈನಿತಾಲ್ ತಲುಪಲು ವಾಹನ ಸವಾರರು ಮುರಾದಾಬಾದ್, ರಾಂಪುರ್ ಮತ್ತು ಬಿಲಾಸ್‌ಪುರ್ ಮಾರ್ಗವಾಗಿ ಸಾಗಬೇಕಾಗಿದ್ದು, ಭಾರಿ ಟ್ರಾಫಿಕ್ ದಟ್ಟಣೆ ಮತ್ತು ಕಿರಿದಾದ ರಸ್ತೆಗಳಿಂದಾಗಿ ಸರಿಸುಮಾರು 7 ರಿಂದ 8 ಗಂಟೆಗಳ ದೀರ್ಘ ಪ್ರಯಾಣ ಮಾಡಬೇಕಾಗುತ್ತದೆ. ಆದರೆ, ಹೊಸದಾಗಿ ನಿರ್ಮಾಣವಾಗಲಿರುವ ಈ ಗ್ರೀನ್‌ಫೀಲ್ಡ್ ಹೆದ್ದಾರಿಯು ಈ ಪ್ರಯಾಣದ ಅವಧಿಯನ್ನು ಕೇವಲ 4 ಗಂಟೆಗಿಂತ ಕಡಿಮೆ ಅವಧಿಗೆ ಇಳಿಸಲಿದೆ. ಇದು ದೆಹಲಿ ಎನ್‌ಸಿಆರ್ ನಿವಾಸಿಗಳಿಗೆ ವಾರಾಂತ್ಯದ ರಜೆಗಳಲ್ಲಿ ಯಾವುದೇ ಆಯಾಸವಿಲ್ಲದೆ ನೈನಿತಾಲ್, ಭೀಮ್ತಾಲ್ ಮತ್ತು ರಾಣಿಖೇತ್‌ನಂತಹ ಸುಂದರ ಗಿರಿಧಾಮಗಳಿಗೆ ಭೇಟಿ ನೀಡಲು ದಿಕ್ಸೂಚಿಯಾಗಲಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಗಳ ಪ್ರಕಾರ, ಈ ಹೊಸ ಗ್ರೀನ್‌ಫೀಲ್ಡ್ ಕಾರಿಡಾರ್ ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿ NH 9 ಮತ್ತು NH 109ರ ಮಾರ್ಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ಹೊಸ ಭೂಭಾಗದ ಮೂಲಕ ಹಾದುಹೋಗಲಿದೆ. ಈ ಹೆದ್ದಾರಿಯು ಉತ್ತರ ಪ್ರದೇಶದ ಪ್ರಮುಖ ಕೈಗಾರಿಕಾ ನಗರಗಳು ಮತ್ತು ಮುರಾದಾಬಾದ್‌ನಂಥ ದಟ್ಟಣೆಯ ವಲಯಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡಲಿದೆ. ಇದರಿಂದಾಗಿ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ಗಂಟೆಗೆ 100 ಕಿಲೋಮೀಟರ್ ಸ್ಥಿರ ವೇಗದಲ್ಲಿ ಚಲಿಸಲು ಸಾಧ್ಯವಾಗುತ್ತದೆ.

ಈ ಇಡೀ ಕಾರಿಡಾರ್ ಅನ್ನು ಆರಂಭದಲ್ಲಿ 4-ಲೇನ್ ಹೆದ್ದಾರಿಯನ್ನಾಗಿ ನಿರ್ಮಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇದನ್ನು 6-ಲೇನ್‌ಗೆ ವಿಸ್ತರಿಸಲು ಅಗತ್ಯವಿರುವ ಭೂಮಿಯನ್ನು ಮೊದಲೇ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ