Tuesday, July 7, 2026
Tuesday, July 7, 2026

ಅಮರಾವತಿ: ಪರಿಸರ ಪ್ರವಾಸೋದ್ಯಮಕ್ಕೆ ಹೊಸ ಆಯಾಮ

ಸುಮಾರು 17 ಕೋಟಿ ರು. ವೆಚ್ಚದ ರೈನ್‌ ಫಾರೆಸ್ಟ್ ಯೋಜನೆ ಕೈಗೊಳ್ಳಲು ಸರಕಾರ ಸಿದ್ಧತೆ ನಡೆಸಿದೆ. ಈ ಯೋಜನೆಯು ಅಮರಾವತಿಯನ್ನು ಹಸಿರು ನಗರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಪ್ರಯತ್ನಗಳಲ್ಲಿ ಒಂದಾಗಿದ್ದು, ಸುಮಾರು ಐದು ಎಕರೆ ಪ್ರದೇಶದಲ್ಲಿ ದಟ್ಟ ಕಾಡು ನಿರ್ಮಿಸಲಾಗುತ್ತದೆ.

ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಸುಮಾರು 17 ಕೋಟಿ ರು. ವೆಚ್ಚದ ರೈನ್‌ ಫಾರೆಸ್ಟ್ ಯೋಜನೆ ಕೈಗೊಳ್ಳಲು ಸರಕಾರ ಸಿದ್ಧತೆ ನಡೆಸಿದೆ. ಈ ಯೋಜನೆಯು ಅಮರಾವತಿಯನ್ನು ಹಸಿರು ನಗರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಪ್ರಯತ್ನಗಳಲ್ಲಿ ಒಂದಾಗಿದ್ದು, ಸುಮಾರು ಐದು ಎಕರೆ ಪ್ರದೇಶದಲ್ಲಿ ದಟ್ಟ ಕಾಡು ನಿರ್ಮಿಸಲಾಗುತ್ತದೆ.

ಈ ಕಾಡಿನಲ್ಲಿ ಸ್ಥಳೀಯ ಹಾಗೂ ಅಪರೂಪದ ವಿವಿಧ ಜಾತಿಯ ಮರಗಳು, ಪೊದೆಗಳು ಮತ್ತು ಸಸ್ಯಗಳನ್ನು ನೆಡುವ ಮೂಲಕ ನೈಸರ್ಗಿಕ ಅರಣ್ಯದ ಅನುಭವವನ್ನು ಸೃಷ್ಟಿಸಲಾಗುತ್ತದ್ದು, ಇದರಿಂದ ಜೀವವೈವಿಧ್ಯ ಸಂರಕ್ಷಣೆಗೆ ಉತ್ತೇಜನ ದೊರೆಯುವುದರ ಜತೆಗೆ ನಗರ ಪ್ರದೇಶದಲ್ಲಿ ಹಸಿರು ವಾತಾವರಣವೂ ಹೆಚ್ಚಾಗಲಿದೆ.

ಇದನ್ನೂ ಓದಿ: ಹೈಡ್ರೋಫೋಬಿಯಾ ಇಂದಿಗೂ ಕಾಡುತ್ತಿದೆ – ಐಶ್ವರ್ಯಾ ಸಿಂಧೋಗಿ

ಅಮರಾವತಿ ರಾಜಧಾನಿ ಪ್ರದೇಶದ ಕೊಂಡವೀಟಿ ವಾಗುವಿನ ಹಸಿರು ನೀರಿನ ಮೂಲವಾದ ಸಖಾಮುರು ಜಲಾಶಯವನ್ನು ಪ್ರವಾಹ ತಗ್ಗಿಸುವಿಕೆ, ಅಂತರ್ಜಲ ಮರುಪೂರಣ, ಅಲಂಕಾರಿಕ ಭೂದೃಶ್ಯ ಮತ್ತು ಭವಿಷ್ಯದ ಸಂಚರಣೆ ಸೇರಿದಂತೆ ಬಹು ಉದ್ದೇಶಗಳನ್ನು ಪೂರೈಸಲು ಅಭಿವೃದ್ಧಿಪಡಿಸಲಾಗಿದೆ. N-11 ಮತ್ತು N-12 ರಸ್ತೆಗಳು ಮತ್ತು E-8 ಮತ್ತು E-9 ರಸ್ತೆಗಳ ನಡುವೆ ಇರುವ ಈ ಜಲಾಶಯವು 0.03 TMC ಸಂಗ್ರಹ ಸಾಮರ್ಥ್ಯ ಮತ್ತು ಸರಾಸರಿ ಎಂಟು ಮೀಟರ್ ಆಳವನ್ನು ಹೊಂದಿದೆ.

Untitled design (16)

200 ಕ್ಕೂ ಹೆಚ್ಚು ಟಿಪ್ಪರ್‌ಗಳು ಮತ್ತು 50 ಅಗೆಯುವ ಯಂತ್ರಗಳನ್ನು ಬಳಸಿಕೊಂಡು ಕೇವಲ ನಾಲ್ಕು ತಿಂಗಳಲ್ಲಿ ನಿರ್ಮಿಸಲಾದ ಈ ಯೋಜನೆಯು ಸುಮಾರು 13 ಲಕ್ಷ ಘನ ಮೀಟರ್ ಮಣ್ಣನ್ನು ಅಗೆಯುವುದನ್ನು ಒಳಗೊಂಡಿತ್ತು ಎಂದು ಶ್ರೀ ಗೋಪಿ ಕೃಷ್ಣ ಹೇಳಿದರು. ಇಳಿಜಾರು ರಕ್ಷಣೆಗಾಗಿ ಸುಮಾರು 70,000 ಚದರ ಮೀಟರ್ ಗೇಬಿಯನ್ ಜಾಲರಿಯನ್ನು ಹಾಕಲಾಗಿದೆ ಎಂದು ಹೇಳಿದರು.

ಪ್ರವಾಸಿಗರನ್ನು ಆಕರ್ಷಿಸಲು ಯೋಜನೆಯಲ್ಲಿ ಪಾದಚಾರಿ ಮಾರ್ಗಗಳು, ವಾಕ್‌ ವೇಗಳು, ವೀಕ್ಷಣಾ ಸ್ಥಳಗಳು, ವಿಶ್ರಾಂತಿ ವಲಯಗಳು, ಮಾಹಿತಿ ಫಲಕಗಳು ಹಾಗೂ ಪರಿಸರ ಶಿಕ್ಷಣಕ್ಕೆ ಅನುಕೂಲವಾಗುವ ವ್ಯವಸ್ಥೆಗಳು ರೂಪುಗೊಳ್ಳಲಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಪ್ರಕೃತಿ ಪ್ರಿಯರಿಗೆ ಇದು ವಿಶೇಷ ಆಕರ್ಷಣೆಯಾಗಲಿದೆ.

ಈ ಯೋಜನೆಯು ಅಮರಾವತಿಯ ಹಸಿರು ಅಭಿವೃದ್ಧಿಯ ಭಾಗವಾಗಿದ್ದು, ನಗರದಲ್ಲಿ ಈಗಾಗಲೇ ರೂಪುಗೊಳ್ಳುತ್ತಿರುವ ವಿವಿಧ ಪರಿಸರ ಸ್ನೇಹಿ ಯೋಜನೆಗಳಿಗೆ ಪೂರಕವಾಗಲಿದೆ. ಸರಕಾರವು ಅಮರಾವತಿಯನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿ ರಾಜಧಾನಿಯಾಗಿ ರೂಪಿಸುವ ಗುರಿಯೊಂದಿಗೆ ಹಸಿರು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!