Tuesday, September 1, 2026
Tuesday, September 1, 2026

ಸ್ಪೇನ್‌ನ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ದುರ್ಘಟನೆ

ಪಾರ್ಕ್‌ನಲ್ಲಿರುವ 'ಬ್ಯಾಟ್‌ಮನ್ ಗೋಥಮ್ ಸಿಟಿ ಎಸ್ಕೇಪ್' (Batman Gotham City Escape) ಎನ್ನುವ ರೋಲರ್ ಕೋಸ್ಟರ್ ಸವಾರಿಯ ವೇಳೆ ಈ ಅಪಘಾತ ಸಂಭವಿಸಿದೆ. ಸೌಲಭ್ಯದ ಪ್ರಕಾರ, ಈ ಹೈ-ಸ್ಪೀಡ್ ರೋಲರ್ ಕೋಸ್ಟರ್ ಸುಮಾರು 45 ಮೀಟರ್ ಎತ್ತರದಿಂದ 98 ಡಿಗ್ರಿ ಇಳಿಕೆ ಹಾಗೂ ಗಂಟೆಗೆ 100 ಕಿಮೀ.

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಪ್ರಸಿದ್ಧ 'ಪಾರ್ಕೆ ವಾರ್ನರ್' ಥೀಮ್ ಪಾರ್ಕ್‌ನಲ್ಲಿ ಸಂಭವಿಸಿದ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಬ್ಯಾಟ್‌ಮನ್ ಥೀಮ್‌ ರೋಲರ್ ಕೋಸ್ಟರ್‌ನಲ್ಲಿ 49 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಎರಡೂ ಕಾಲುಗಳು ಮುರಿದಿವೆ.

ಇದನ್ನೂ ಓದಿ: ಸ್ಪೇನ್‌ನಲ್ಲಿ ಶೀಘ್ರದಲ್ಲೇ UPI ಪಾವತಿ ಸೌಲಭ್ಯ?

ಪಾರ್ಕ್‌ನಲ್ಲಿರುವ 'ಬ್ಯಾಟ್‌ಮನ್ ಗೋಥಮ್ ಸಿಟಿ ಎಸ್ಕೇಪ್' (Batman Gotham City Escape) ಎನ್ನುವ ರೋಲರ್ ಕೋಸ್ಟರ್ ಸವಾರಿಯ ವೇಳೆ ಈ ಅಪಘಾತ ಸಂಭವಿಸಿದೆ. ಸೌಲಭ್ಯದ ಪ್ರಕಾರ, ಈ ಹೈ-ಸ್ಪೀಡ್ ರೋಲರ್ ಕೋಸ್ಟರ್ ಸುಮಾರು 45 ಮೀಟರ್ ಎತ್ತರದಿಂದ 98 ಡಿಗ್ರಿ ಇಳಿಕೆ ಹಾಗೂ ಗಂಟೆಗೆ 100 ಕಿಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರೊಬ್ಬರು ಸವಾರಿ ಮಾಡುವಾಗ ಹಠಾತ್ ಆಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.

ತುರ್ತು ಸೇವಾ ಸಿಬ್ಬಂದಿ ನೀಡಿದ ಮಾಹಿತಿಯ ಪ್ರಕಾರ, ಗಾಯಾಳು ವ್ಯಕ್ತಿಯ ಎಡಗಾಲು ಹಾಗೂ ಬಲಗಾಲು ಫ್ರ್ಯಾಕ್ಚರ್‌ ಸಂಭವಿಸಿದೆ. ಅಪಘಾತದ ತಕ್ಷಣವೇ ತುರ್ತು ವೈದ್ಯಕೀಯ ತಂಡವು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಏರ್ ಆಂಬುಲೆನ್ಸ್ ಮೂಲಕ 12 ಡಿ ಆಕ್ಟುಬ್ರೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸಿದ ಕೂಡಲೇ ರೈಲನ್ನು ತಕ್ಷಣವೇ ನಿಲ್ಲಿಸಲಾಯಿತು ಮತ್ತು ಎಲ್ಲ ತುರ್ತು ಸುರಕ್ಷತಾ ಕ್ರಮಗಳನ್ನು ಜರಗಿಸಲಾಯಿತು ಎಂದು ಪಾರ್ಕ್ ಆಡಳಿತ ಮಂಡಳಿ ತಿಳಿಸಿದೆ. ಸ್ಥಳದಲ್ಲಿ ಸೇರಿದ್ದ ಇತರ ಪ್ರವಾಸಿಗರು ಆತಂಕಗೊಂಡು ಅಳಲು ಶುರುಮಾಡಿದರು ಮತ್ತು ಕೆಲವರಿಗೆ ಆಂಕ್ಸೈಟಿ ಅಟ್ಯಾಕ್‌ ಆದಂತೆ ಕಂಡುಬಂದವು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಘಟನೆಯ ಕುರಿತು ಸ್ಪ್ಯಾನಿಷ್ ಸಿವಿಲ್ ಗಾರ್ಡ್ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಹಾಗೂ ಸಂಪೂರ್ಣ ಸುರಕ್ಷತಾ ತಪಾಸಣೆ ನಡೆಸುವವರೆಗೆ ಈ ರೋಲರ್ ಕೋಸ್ಟರ್ ಸವಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಪಾರ್ಕ್ ಮ್ಯಾನೇಜ್‌ಮೆಂಟ್ ಸ್ಪಷ್ಟಪಡಿಸಿದೆ. ಪಾರ್ಕ್‌ನ ಉಳಿದ ಭಾಗಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ