Monday, July 6, 2026
Monday, July 6, 2026

ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾದ ಬೈಂದೂರಿನ ಸೋಮೇಶ್ವರ ಬೀಚ್

ಪಡುವರಿಯ ಒಟ್ಟಿನೇನೆ ಗುಡ್ಡದ ಕೆಳಗೆ ಇರುವ ಈ ಕಡಲತೀರಕ್ಕೆ ಪಕ್ಕದ ಸೋಮೇಶ್ವರ ದೇವಸ್ಥಾನದಿಂದ ಈ ಹೆಸರು ಬಂದಿದೆ. ಬೈಂದೂರು ನದಿ ಎಂದೂ ಕರೆಯಲ್ಪಡುವ ಸುಮನಾವತಿ ನದಿಯು ಈ ಸ್ಥಳದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ, ಇದು ಡೆಲ್ಟಾವನ್ನು ರೂಪಿಸುತ್ತದೆ ಮತ್ತು ಸಮುದ್ರ ಆಳವಿಲ್ಲದ ಕಾರಣ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಉಡುಪಿ ಜಿಲ್ಲೆಯ ಬೈಂದೂರಿನ ಸೋಮೇಶ್ವರ ಬೀಚ್‌ನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಲಿಮಿಟೆಡ್ (ಕೆಟಿಐಎಲ್)ಯ ಅಂದಾಜು ₹11.32 ಕೋಟಿ ರು. ವೆಚ್ಚದ ಈ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಈ ಯೋಜನೆಯ ಮೂಲಕ ಬೀಚ್‌ಗೆ ಭೇಟಿ ನೀಡುವವರಿಗೆ ಸುರಕ್ಷಿತ, ಸ್ವಚ್ಛ ಮತ್ತು ಅನುಕೂಲಕರ ವಾತಾವರಣವನ್ನು ಒದಗಿಸುವ ಉದ್ದೇಶ ಹೊಂದಿದೆ.

ಪಡುವರಿಯ ಒಟ್ಟಿನೇನೆ ಗುಡ್ಡದ ಕೆಳಗೆ ಇರುವ ಈ ಕಡಲತೀರಕ್ಕೆ ಪಕ್ಕದ ಸೋಮೇಶ್ವರ ದೇವಸ್ಥಾನದಿಂದ ಈ ಹೆಸರು ಬಂದಿದೆ. ಬೈಂದೂರು ನದಿ ಎಂದೂ ಕರೆಯಲ್ಪಡುವ ಸುಮನಾವತಿ ನದಿಯು ಈ ಸ್ಥಳದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ, ಇದು ಡೆಲ್ಟಾವನ್ನು ರೂಪಿಸುತ್ತದೆ ಮತ್ತು ಸಮುದ್ರ ಆಳವಿಲ್ಲದ ಕಾರಣ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಇದನ್ನೂ ಓದಿ: ಟೆಲ್‌ ಅವಿವ್‌ನ 13 ಬೀಚ್‌ಗಳಿಗೆ ಬ್ಲೂ ಫ್ಲ್ಯಾಗ್‌ ಮಾನ್ಯತೆ!

ಉಡುಪಿ-ಕೊಲ್ಲೂರು-ಮುರುಡೇಶ್ವರ-ಗೋಕರ್ಣ ಕರಾವಳಿ ಪ್ರವಾಸೋದ್ಯಮ ಸರ್ಕ್ಯೂಟ್‌ನಲ್ಲಿ ಬೀಚ್ ಬರುವುದರಿಂದ, ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಕೆಟಿಐಎಲ್ 2023 ರಲ್ಲಿ ಬೀಚ್ ಅಭಿವೃದ್ಧಿಯನ್ನು ಪ್ರಾರಂಭಿಸಿತು. ಸೌಲಭ್ಯಗಳನ್ನು ಒದಗಿಸಲು ಕಡಿಮೆ ಸರಕಾರಿ ಭೂಮಿ ಲಭ್ಯವಿದ್ದ ಕಾರಣ, ಪ್ರವಾಸೋದ್ಯಮ ಇಲಾಖೆಯು ಬೀಚ್‌ಗೆ ಹತ್ತಿರದಲ್ಲಿ ಸುಮಾರು 2.7 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಸ್ವಾಧೀನ ನಡೆಯದಿದ್ದಾಗ ಸ್ವಲ್ಪ ಭೂಮಿಯನ್ನು ಖರೀದಿಸಿತು.

ಬೀಚ್ ಪ್ರದೇಶದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಾಹನ ನಿಲುಗಡೆ ವ್ಯವಸ್ಥೆ, 250 ಮೀಟರ್‌ ಉದ್ದದ ಸುಂದರ ಪಾದಚಾರಿ ಮಾರ್ಗ, ಕುಳಿತು ವಿಶ್ರಾಂತಿ ಪಡೆಯಲು ಆಸನಗಳು, ಬೆಳಕಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯಗಳು, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪರಿಸರ ಸ್ನೇಹಿ ರೀತಿಯಲ್ಲಿ ಬೀಚ್ ಅಭಿವೃದ್ಧಿಪಡಿಸುವುದಕ್ಕೂ ಆದ್ಯತೆ ನೀಡಲಾಗಿದೆ.

Untitled design (33)

ಸೋಮೇಶ್ವರ ಬೀಚ್ ಅರಬ್ಬೀ ಸಮುದ್ರದ ಸುಂದರ ನೋಟ, ಶಾಂತ ವಾತಾವರಣ ಹಾಗೂ ಪ್ರಕೃತಿ ಸೌಂದರ್ಯದಿಂದ ಈಗಾಗಲೇ ಪ್ರವಾಸಿಗರ ಮೆಚ್ಚುಗೆ ಪಡೆದಿದೆ. ಸಮೀಪದಲ್ಲಿರುವ ಬೆಟ್ಟಗಳು, ಹಸಿರು ಪರಿಸರ ಮತ್ತು ನದಿಯು ಸಮುದ್ರ ಸೇರುವ ದೃಶ್ಯ ಈ ಪ್ರದೇಶದ ವಿಶೇಷ ಆಕರ್ಷಣೆಯಾಗಿದೆ.

ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ಬೀಚ್‌ನಲ್ಲಿ ಕುಟುಂಬ ಸಮೇತರಾಗಿ ಭೇಟಿ ನೀಡುವವರಿಗೆ ಅನುಕೂಲವಾಗುವಂತೆ ಹಲವು ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಪ್ರವಾಸಿಗರು ಹೆಚ್ಚು ಸಮಯ ಕಳೆಯುವಂತೆ ವಿನ್ಯಾಸಗೊಳಿಸಿದ ಸಾರ್ವಜನಿಕ ಸ್ಥಳಗಳು ಹಾಗೂ ಸೌಲಭ್ಯಗಳು ಸ್ಥಳದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲಿವೆ.

ರಾಜ್ಯದಲ್ಲಿ ಸಮುದ್ರ ತೀರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಇದರಿಂದ ಸ್ಥಳೀಯ ಪ್ರವಾಸೋದ್ಯಮ ಬೆಳವಣಿಗೆಗೆ ವೇಗ ಸಿಗುವ ಜತೆಗೆ ಸ್ಥಳೀಯರಿಗೆ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳೂ ಹೆಚ್ಚುವ ನಿರೀಕ್ಷೆಯಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುವುದರಿಂದ ಹೊಟೇಲ್‌, ಆಹಾರ ಮಳಿಗೆ, ಸಾರಿಗೆ ಹಾಗೂ ಇತರ ಸೇವಾ ವಲಯಗಳಿಗೂ ಲಾಭವಾಗಲಿದೆ.

ಮಳೆಗಾಲದ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಸ್ವಚ್ಛತೆ, ಸುರಕ್ಷತೆ ಹಾಗೂ ಪ್ರವಾಸಿಗರ ಅನುಕೂಲಕ್ಕೆ ಆದ್ಯತೆ ನೀಡುವ ಮೂಲಕ ಸೋಮೇಶ್ವರ ಬೀಚ್‌ನ್ನು ರಾಜ್ಯದ ಪ್ರಮುಖ ಕರಾವಳಿ ಪ್ರವಾಸಿ ತಾಣಗಳ ಸಾಲಿನಲ್ಲಿ ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡೇ ಆಧುನಿಕ ಸೌಲಭ್ಯಗಳನ್ನು ಒದಗಿಸಿರುವ ಈ ಅಭಿವೃದ್ಧಿ ಯೋಜನೆಯಿಂದ ಬೈಂದೂರು ಪ್ರವಾಸೋದ್ಯಮ ನಕ್ಷೆಯಲ್ಲಿ ಇನ್ನಷ್ಟು ಮಹತ್ವ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಸೋಮೇಶ್ವರ ಬೀಚ್‌ ಬಗ್ಗೆ ಮಾಹಿತಿ:

  • ಉಡುಪಿ ಜಿಲ್ಲೆಯ ಬೈಂದೂರ್‌ನಲ್ಲಿದೆ
  • ಪಡುವರಿಯ ಒಟ್ಟಿನೇನೆ ಗುಡ್ಡದ ಕೆಳಗೆ ಇರುವ ಈ ಕಡಲತೀರಕ್ಕೆ ಪಕ್ಕದ ಸೋಮೇಶ್ವರ ದೇವಸ್ಥಾನದಿಂದ ಈ ಹೆಸರು ಬಂತು
  • ಸುಮನವತಿ ನದಿ ಅಥವಾ ಬೈಂದೂರ್‌ ನದಿ ಅರಬ್ಬೀ ಸಮುದ್ರ ಸೇರುತ್ತದೆ
  • ಇದು ಡೆಲ್ಟಾವನ್ನು ರೂಪಿಸುತ್ತದೆ
  • ಸ್ವಚ್ಛವಾದ ಬೀಚ್‌ ಹಾಗೂ ಸಮುದ್ರ ಆಳವಿಲ್ಲದ ಕಾರಣ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪ್ರವಾಸಿಗರು ಏನ್ನೆಲ್ಲಾ ನಿರೀಕ್ಷಿಸಬಹುದು?

  • ವಾಹನ ನಿಲುಗಡೆ ವ್ಯವಸ್ಥೆ
  • ಸುಂದರ ಪಾದಚಾರಿ ಮಾರ್ಗ
  • ಕುಳಿತು ವಿಶ್ರಾಂತಿ ಪಡೆಯಲು ಆಸನಗಳು
  • ಬೆಳಕಿನ ವ್ಯವಸ್ಥೆ
  • ಸಾರ್ವಜನಿಕ ಶೌಚಾಲಯಗಳು
  • ಕುಡಿಯುವ ನೀರಿನ ಸೌಲಭ್ಯ
  • ಪರಿಸರ ಸ್ನೇಹಿ ರೀತಿಯಲ್ಲಿನ ಬೀಚ್
Untitled design (35)

ದಾರಿ ಹೇಗೆ?

  • ಬೈಂದೂರ್‌( ಮೂಕಾಂಬಿಕ ರಸ್ತೆ) ರೈಲ್ವೇ ಸ್ಟೇಷನ್‌ - 5 ಕಿಮೀ
  • ಭಟ್ಕಳ ರೈಲ್ವೇ ಸ್ಟೇಷನ್‌ - 18 ಕಿಮೀ
  • ಉಡುಪಿ ರೈಲ್ವೇ ಸ್ಟೇಷನ್‌ - 75 ಕಿಮೀ
  • ಮಣಿಪಾಲ್‌ - 75 ಕಿಮೀ
  • ಕಾಪು ಲೈಟ್‌ಹೌಸ್‌ - 86 ಕಿಮೀ
  • ಮಂಗಳೂರು ಏರ್‌ಪೋರ್ಟ್‌ - 130 ಕಿಮೀ
  • ಶಿವಮೊಗ್ಗ ರೈಲ್ವೇ ಸ್ಟೇಷನ್‌ - 160 ಕಿಮೀ
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..