Monday, August 31, 2026
Monday, August 31, 2026

ಸೈಕಲ್ ಚಕ್ರಗಳ ಮೇಲೆ ‘ನಶೆಮುಕ್ತ ಭಾರತ’ದ ಸಂದೇಶ

ನಶೆಮುಕ್ತ ಭಾರತ'ದ ಜಾಗೃತಿಗಾಗಿ ಇಟಗಿಯಿಂದ ಅಂಜನಾದ್ರಿವರೆಗೆ ಸೈಕಲ್ ಯಾತ್ರೆ ಕೈಗೊಂಡಿರುವ ವಿದ್ಯಾರ್ಥಿ ಪ್ರಜ್ವಲ್ ಅವರ ದಿಟ್ಟ ಹೆಜ್ಜೆ ಸಮಾಜಕ್ಕೆ ಮಾದರಿಯಾಗಿದೆ.

ಬದಲಾವಣೆ ಕೇವಲ ಮಾತಿನಿಂದ ಬರುವುದಿಲ್ಲ, ಅದಕ್ಕೆ ಬದ್ಧತೆಯ ಕ್ರಿಯೆ ಬೇಕು ಎಂಬುದನ್ನು ಪ್ರಜ್ವಲ್ ಎಂಬ ಯುವಕ ಸಾಬೀತುಪಡಿಸಿದ್ದಾರೆ. ಇಟಗಿಯಿಂದ ಪವಿತ್ರ ಕ್ಷೇತ್ರ ಅಂಜನಾದ್ರಿವರೆಗೆ ಸೈಕಲ್ ಯಾತ್ರೆ ಕೈಗೊಂಡಿರುವ ಇವರು, ಸಮಾಜಕ್ಕೆ ನಶೆಮುಕ್ತ ಅಭಿಯಾನದ ಮಹತ್ವದ ಸಂದೇಶವನ್ನು ಸಾರುತ್ತಿದ್ದಾರೆ.‌

ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಪ್ರಜ್ವಲ್, ಬೆನ್ನಿಗೆ ಭಾರತದ ತ್ರಿವರ್ಣ ಧ್ವಜ ಕಟ್ಟಿ, ಸೈಕಲ್ ಮುಂಭಾಗದಲ್ಲಿ ಜಾಗೃತಿಯ ಪ್ಲಕಾರ್ಡ್ ಅಳವಡಿಸಿಕೊಂಡು ಕರ್ನಾಟಕದ ಹೆದ್ದಾರಿಯಲ್ಲಿ ಏಕಾಂಗಿಯಾಗಿ ಸಾಗುತ್ತಿದ್ದಾರೆ. ಬಿಸಿಲು, ದಣಿವು ಮತ್ತು ಕಠಿಣ ರಸ್ತೆಯನ್ನು ಲೆಕ್ಕಿಸದೆ ಕಳೆದ ಎರಡು ದಿನಗಳಿಂದ ನಿರಂತರವಾಗಿ ಪೆಡಲ್ ತುಳಿಯುತ್ತಿರುವ ಈ ಯುವಕನ ಸಾಮಾಜಿಕ ಕಾಳಜಿ ಹಾಗೂ ದೃಢ ಸಂಕಲ್ಪ ಹಾದಿಹೋಕರ ಗಮನ ಸೆಳೆಯುತ್ತಿದೆ.

ಹೆದ್ದಾರಿಯಲ್ಲಿ ಪ್ರಜ್ವಲ್ ಅವರನ್ನು ಭೇಟಿಯಾದ ಸಾರ್ವಜನಿಕರು ಅವರ ದೇಶಪ್ರೇಮ ಹಾಗೂ ಧೈರ್ಯವನ್ನು ಕಂಡು ಬೆರಗಾಗಿದ್ದಾರೆ. ʼಸರಕಾರ ಮತ್ತು ದೊಡ್ಡ ಸಂಸ್ಥೆಗಳು ಮಾಡಬೇಕಾದ ಮಹತ್ವದ ಜಾಗೃತಿಯನ್ನು ಈ ಚಿಕ್ಕ ವಯಸ್ಸಿನ ಹುಡುಗ ಒಬ್ಬನೇ ಮಾಡುತ್ತಿದ್ದಾನೆʼ ಎಂದು ಮುಕ್ತಕಂಠದಿಂದ ಶ್ಲಾಘಿಸಿ, ಶುಭ ಹಾರೈಸಿದ್ದಾರೆ.

ಯುವ ಸಮುದಾಯ ದುಶ್ಚಟ ಹಾಗೂ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವ ಇಂದಿನ ದಿನಗಳಲ್ಲಿ, ಪ್ರಜ್ವಲ್ ಅವರ ಈ ನಿಸ್ವಾರ್ಥ ಯಾತ್ರೆ ಇಡೀ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ. ಆರೋಗ್ಯವಂತ ಹಾಗೂ ವ್ಯಸನಮುಕ್ತ ಭಾರತ ನಿರ್ಮಾಣದ ಇವರ ಈ ಸಾರ್ಥಕ ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ಸದಾ ಇರಲಿ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..