Thursday, February 19, 2026
Thursday, February 19, 2026

ಕೇಂದ್ರ ಅಯವ್ಯಯದಲ್ಲಿ ಜೈವಿಕ ಪ್ರವಾಸೋದ್ಯಮದಕ್ಕೆ ಸಿಕ್ಕಿದೆ ಹೆಚ್ಚಿನ ಅವಕಾಶ

ಟೊಂಕದ ಆಮೆಗಳು ಕೇವಲ ಪರಿಸರದ ಸಂಕೇತವಲ್ಲ. ಅವು ಸ್ಥಿರ ಪ್ರವಾಸೋದ್ಯಮದ ಆಧಾರ. ಜವಾಬ್ದಾರಿಯುತ ಟರ್ಟಲ್ ಟೂರಿಸಂ ಸ್ಥಳೀಯರಿಗೆ ಉದ್ಯೋಗ ಕೊಡುತ್ತದೆ, ಪರಿಸರ ಜಾಗೃತಿ ಮೂಡಿಸುತ್ತದೆ, ಮತ್ತು ಮುಂದಿನ ತಲೆಮಾರಿಗೆ ಬದುಕಿನ ಪಾಠ ಕಲಿಸುತ್ತದೆ. ಆದರೆ ಸಂತತಿಯೇ ಉಳಿಯದಿದ್ದರೆ ಅಧ್ಯಯನ ಪ್ರವಾಸೋದ್ಯಮವೂ ಉಳಿಯದು.

ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ (ರಿ)

--

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡು ಟೊಂಕ ಬೀಚ್ ಕೇವಲ ಒಂದು ಪ್ರವಾಸಿ ತೀರವಲ್ಲ. ಅದು ಸಾವಿರಾರು ವರ್ಷಗಳಿಂದ ಆಲಿವ್ ರಿಡ್ಲಿ ಸಮುದ್ರ ಆಮೆಗಳು ನಂಬಿಕೊಂಡು ಬಂದಿರುವ ಸಂತಾನೋತ್ಪತ್ತಿಯ ಪವಿತ್ರ ನೆಲ. ಇಲ್ಲಿ ಪ್ರತಿವರ್ಷ ಆಮೆಗಳು ಬಂದು ಮೊಟ್ಟೆ ಇಡುತ್ತವೆ; ಪ್ರಕೃತಿಯ ನಿಯಮದಂತೆ ಮರಿಗಳು ಹುಟ್ಟಿ ಸಮುದ್ರ ಸೇರುತ್ತವೆ. ಇದು ಜೀವನಚಕ್ರ—ಮಾನವ ಹಸ್ತಕ್ಷೇಪವಿಲ್ಲದೆ ಸಾಗಬೇಕಾದ ಚಕ್ರ.

ಆದರೆ ಇಂದು ಟೊಂಕ ಎದುರಿಸುತ್ತಿರುವ ಸವಾಲು ಗಂಭೀರವಾಗಿದೆ. ರೈಲ್ವೇ ಟ್ರಾಕ್ ವಿಸ್ತರಣೆ, ಹೊಸ ಹಡಗು ನಿರ್ಮಾಣ ಕೇಂದ್ರಗಳು, ಹಾಗೂ ಅವುಗಳಿಗೆ ಸಂಬಂಧಿಸಿದ ಬೆಳಕು, ಶಬ್ದ, ಕಂಪನ—ಇವೆಲ್ಲವೂ ಈ ನಾಜೂಕಾದ ಜೀವನಚಕ್ರಕ್ಕೆ ಭಾರಿ ಧಕ್ಕೆಯಾಗಿದೆ. ಅಭಿವೃದ್ಧಿ ಅಗತ್ಯ, ಆದರೆ ಅದು ಪ್ರಕೃತಿ ಬೆಲೆ ತೆರಬೇಕೇ ?

ಇದನ್ನೂ ಓದಿ: ಬಜೆಟ್ 2026–27: ಪ್ರವಾಸೋದ್ಯಮ ಮತ್ತು ಪ್ರಯಾಣಿಕ ಸಾರಿಗೆ ಕ್ಷೇತ್ರಕ್ಕೆ ನಿರ್ಣಾಯಕ ಕ್ಷಣ

ಆಲಿವ್ ರಿಡ್ಲಿ ಆಮೆಗಳು ತಮ್ಮ ಹುಟ್ಟಿದ ತೀರಕ್ಕೇ ಮರಳಿ ಬರುವ ಅಪರೂಪದ ಜೀವಿಗಳು. ಒಂದು ತಪ್ಪು ಬೆಳಕು, ಒಂದು ಅತಿರೇಕ ಶಬ್ದ, ಅಥವಾ ಮರಿಗಳಿಗೆ ದಾರಿ ತಡೆದ ಕಾಂಕ್ರೀಟ್—ಇವು ಸಾಕು, ಶತಮಾನಗಳ ಜೀವಪರಂಪರೆಯನ್ನು ತಡೆಯಲು/ ಮುರಿಯಲು. ರೈಲ್ವೇ ಟ್ರಾಕ್‌ನ ಕಂಪನಗಳು ಮೊಟ್ಟೆಗಳ ಮೇಲೆ ಪರಿಣಾಮ ಬೀರುತ್ತವೆ; ರಾತ್ರಿಯ ಬೆಳಕುಗಳು ಮರಿಗಳನ್ನು ದಿಕ್ಕುತಪ್ಪಿಸುತ್ತವೆ; ಹಡಗು ನಿರ್ಮಾಣದ ಚಟುವಟಿಕೆಗಳು ತೀರದ ಸಹಜ ಸ್ವರೂಪವನ್ನೇ ಬದಲಿಸುತ್ತವೆ.

ಟೊಂಕದ ಆಮೆಗಳು ಕೇವಲ ಪರಿಸರದ ಸಂಕೇತವಲ್ಲ. ಅವು ಸ್ಥಿರ ಪ್ರವಾಸೋದ್ಯಮದ ಆಧಾರ. ಜವಾಬ್ದಾರಿಯುತ ಟರ್ಟಲ್ ಟೂರಿಸಂ ಸ್ಥಳೀಯರಿಗೆ ಉದ್ಯೋಗ ಕೊಡುತ್ತದೆ, ಪರಿಸರ ಜಾಗೃತಿ ಮೂಡಿಸುತ್ತದೆ, ಮತ್ತು ಮುಂದಿನ ತಲೆಮಾರಿಗೆ ಬದುಕಿನ ಪಾಠ ಕಲಿಸುತ್ತದೆ. ಆದರೆ ಸಂತತಿಯೇ ಉಳಿಯದಿದ್ದರೆ ಅಧ್ಯಯನ ಪ್ರವಾಸೋದ್ಯಮವೂ ಉಳಿಯದು.

Untitled design - 2026-02-19T175318.279

ಅರಣ್ಯ ಇಲಾಖೆ ಮತ್ತು ಸ್ಥಳೀಯ ಸಮುದಾಯಗಳು ಈಗಾಗಲೇ ಶ್ಲಾಘನೀಯ ಕೆಲಸ ಮಾಡುತ್ತಿವೆ. ಆದರೆ ಇದು ಸಾಕಾಗುವುದಿಲ್ಲ. ಯೋಜನಾ ಹಂತದಲ್ಲೇ ಪರಿಸರ ಸಂವೇದನೆ ಅಳವಡಿಸಬೇಕು. ಆಮೆ ಗೂಡುಕಟ್ಟುವ ಪ್ರದೇಶಗಳಲ್ಲಿ ನೈಟ್ ಲೈಟಿಂಗ್ ನಿಯಂತ್ರಣ ಆಗಬೇಕು. ನಿರ್ಮಾಣ ಕಾಮಗಾರಿಗಳಿಗೆ ಸೀಸನಲ್ ನಿರ್ಬಂಧ, ರೈಲ್ವೇ ಮತ್ತು ಹಡಗು ಯೋಜನೆಗಳಿಗೆ ಕಡ್ಡಾಯ ಪರಿಸರ ಪರಿಣಾಮ ಮೌಲ್ಯಮಾಪನ, ಮತ್ತು ಟೊಂಕವನ್ನು ಎಕೋ-ಸೆನ್ಸಿಟಿವ್ ಝೋನ್ ಆಗಿ ಘೋಷಿಸುವುದು.ಅತೀ ಅಗತ್ಯ.

ಟೊಂಕದಲ್ಲಿ ಉಳಿಯಬೇಕಾದದ್ದು ಕೇವಲ ಸಮುದ್ರತೀರದ ಮರಳು ಮಾತ್ರವಲ್ಲ, ಜೀವನದ ಸಂತತಿಯ ನಿರಂತರತೆ. ಅಭಿವೃದ್ಧಿ ಮಾನವನ ಅಗತ್ಯ, ಸಂರಕ್ಷಣೆ ಮಾನವ ಜವಾಬ್ದಾರಿ. ಎರಡರ ಮಧ್ಯೆ ಸಮತೋಲನ ಸಾಧಿಸದಿದ್ದರೆ, ನಾವು ಕಳೆದುಕೊಳ್ಳುವುದು ಕೇವಲ ಆಮೆಗಳನ್ನಷ್ಟೇ ಅಲ್ಲ—ನಮ್ಮ ಭವಿಷ್ಯವನ್ನೇ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?