ಪಹಲ್ಗಾಮ್ ದಾಳಿ: ಡಿಜಿಸಿಎ ಎಚ್ಚರಿಕೆ, ಹೆಚ್ಚುವರಿ ವಿಮಾನಗಳ ವ್ಯವಸ್ಥೆ
ಆಪತ್ತಿನ ಪರಿಸ್ಥಿತಿಯಲ್ಲಿ ಟಿಕೆಟ್ ದರಗಳನ್ನು ಅತಿರೇಕದಿಂದ ಹೆಚ್ಚಿಸುವುದನ್ನು ತಡೆಯಲು, ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟ ಆದೇಶ ಹೊರಡಿಸಿದೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ಶ್ರೀನಗರ ಮಾರ್ಗದಲ್ಲಿ ದರ ಏರಿಕೆ ಮಾಡಬಾರದು ಎಂಬ ಸ್ಪಷ್ಟ ಸೂಚನೆ ನೀಡಲಾಗಿದೆ.
ಪಹಲ್ಗಾಮ್ ನಲ್ಲಿ (Pahalgam) ಸಂಭವಿಸಿದ ಭೀಕರ ಉಗ್ರ ದಾಳಿಯಲ್ಲಿ (Terror Attack) 26 ಪ್ರವಾಸಿಗರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಹಲವಾರು ಮಂದಿ ಗಾಯಗೊಂಡಿದ್ದಾರೆ. ದೇಶವನ್ನೇ ಬೆಚ್ಚಿ ಬೀಳಿಸಿದ ದುರಂತದ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಏಪ್ರಿಲ್ 23ರಂದು ತುರ್ತು ಸಲಹೆ ಬಿಡುಗಡೆ ಮಾಡಿದೆ. ಘಟನೆ ನಂತರ ಕಾಶ್ಮೀರದಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರವಾಸಿಗರಿಗೆ ಶೀಘ್ರದಲ್ಲಿ ಸಹಾಯ ಮಾಡಲು ಡಿಜಿಸಿಎ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ವಿಮಾನಗಳನ್ನು ಕಾರ್ಯಾಚರಣೆ ಮಾಡಲು ಸೂಚಿಸಿದೆ.
ಪ್ರವಾಸಿಗರಿಗೆ ರಿಟರ್ನ್ ಟಿಕೆಟ್ ಗಳ ರದ್ದುಪಡಿಸುವ ಶುಲ್ಕವಿಲ್ಲ
ಶ್ರೀನಗರ ಪ್ರಯಾಣಕ್ಕೆ ಬುಕ್ ಮಾಡಲಾದ ಟಿಕೆಟ್ಗಳಿಗೆ ರದ್ದತಿ ಮತ್ತು ಬದಲಾವಣೆ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ವಿಮಾನಯಾನ ಸಂಸ್ಥೆಗಳನ್ನು ಡಿಜಿಸಿಎ ಕೇಳಿಕೊಂಡಿದೆ. ಶ್ರೀನಗರದಿಂದ ದೆಹಲಿ, ಮುಂಬೈ ಮತ್ತು ಇತರ ಪ್ರಮುಖ ನಗರಗಳಿಗೆ ವಿಮಾನಗಳ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಪ್ರವಾಸಿಗರಿಗೆ ಎಲ್ಲಾ ಅಗತ್ಯ ನೆರವುಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ.
ಸ್ಥಿತಿ ದುರ್ಬಳಕೆ ತಪ್ಪಿಸಲು ಕ್ರಮ: ಟಿಕೆಟ್ ದರಗಳಲ್ಲಿ ಏರಿಕೆಗೆ ನಿರ್ಬಂಧ
ಆಪತ್ತಿನ ಪರಿಸ್ಥಿತಿಯಲ್ಲಿ ಟಿಕೆಟ್ ದರಗಳನ್ನು ಅತಿರೇಕದಿಂದ ಹೆಚ್ಚಿಸುವುದನ್ನು ತಡೆಯಲು, ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟ ಆದೇಶ ಹೊರಡಿಸಿದೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ಶ್ರೀನಗರ ಮಾರ್ಗದಲ್ಲಿ ದರ ಏರಿಕೆ ಮಾಡಬಾರದು ಎಂಬ ಸ್ಪಷ್ಟ ಸೂಚನೆ ನೀಡಲಾಗಿದೆ.
ದಾಳಿ ಸ್ಥಳಕ್ಕೆ ಅಮಿತ್ ಶಾ ಭೇಟಿ

ಪಹಲ್ಗಾಮ್ ನ ಬೈಸರನ್ ಮೇಡೋದಲ್ಲಿ ನಡೆದ ಈ ದಾಳಿಯ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಭೀಕರ ದಾಳಿಯಲ್ಲಿ ನಿರಪರಾಧ ಪ್ರವಾಸಿಗರ ಸಾವಿನಿಂದ ದೇಶದಾದ್ಯಂತ ಆಘಾತ ಮೂಡಿದೆ.ಬೆಳಗ್ಗೆ, ಶ್ರೀನಗರದ ಪೊಲೀಸ್ ಕಂಟ್ರೋಲ್ ರೂಂ ಬಳಿ ಶ್ರದ್ಧಾಂಜಲಿ ಸಭೆ ನಡೆಯಿತು. ಅಮಿತ್ ಶಾ ದುರಂತದ ಬಲಿಯಾದವರ ನೆನಪಿಗೆ ಪುಷ್ಪಾಂಜಲಿ ಸಲ್ಲಿಸಿದರು. ಬಳಿಕ, ಅವರು ಹತರಾದವರ ಕುಟುಂಬ ಸದಸ್ಯರೊಂದಿಗೆ ಭೇಟಿಯಾಗಿ ಸಂತಾಪ ವ್ಯಕ್ತಪಡಿಸಿದರು.ಉಗ್ರರ ಪತ್ತೆಗಾಗಿ ಭಾರಿ ಶೋಧ ಕಾರ್ಯಾಚರಣೆಘಟನೆ ಬಳಿಕ ಭದ್ರತಾ ಪಡೆಗಳು ಪಹಲ್ಗಾಮ್ ಭಾಗದಲ್ಲಿ ಉಗ್ರರಿಗಾಗಿ ಭಾರೀ ಶೋಧ ಕಾರ್ಯಾಚರಣೆ ಆರಂಭಿಸಿವೆ. ಕಾಶ್ಮೀರದ ಪ್ರವಾಸಿ ಸ್ಥಳಗಳಲ್ಲಿ ಭದ್ರತೆ ಕಟ್ಟು ನಿಟ್ಟಾಗಿ ತಯಾರಿಸಲಾಗಿದೆ. ಸಹಜವಾಗಿ ಜನರಿಂದ ಗಿಜಿಗುಡುವ ಪ್ರವಾಸಿ ಪ್ರದೇಶಗಳು ಈಗ ಖಾಲಿ ಕಾಣಿಸುತ್ತಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಎಲ್ಲಾ ಪ್ರವಾಸಿಗರ ಸುರಕ್ಷತೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದರು.ಪ್ರಮುಖ ವಿಮಾನಯಾನ ಸಂಸ್ಥೆಗಳ ತಕ್ಷಣದ ಪ್ರತಿಕ್ರಿಯೆಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಇಂಡಿಗೋ, ಏಪ್ರಿಲ್ 23ರಂದು ಶ್ರೀನಗರದಿಂದ ಹೆಚ್ಚುವರಿ ವಿಮಾನಗಳನ್ನು ಹಮ್ಮಿಕೊಂಡಿವೆ.#TravelAdvisory: In light of the current situation in #Srinagar, we’ve extended waivers on rescheduling/cancellation. We’re also operating two special flights on April 23. For more information, please visit https://goindigo.in or call +91 124 4973838 - +91 124 6173838ಇಂಡಿಗೋ ಸ್ಪೆಷಲ್ ಫ್ಲೈಟ್ಸ್ ಮತ್ತು ಫೀ ವೇವರ್ ನೀತಿ
- ಇಂಡಿಗೋ ಏಪ್ರಿಲ್ 23ರಂದು ಶ್ರೀನಗರದಿಂದ ದೆಹಲಿ ಮತ್ತು ಮುಂಬೈಗೆ ಎರಡು ವಿಶೇಷ ವಿಮಾನಗಳನ್ನು ಶುರುಮಾಡಿದೆ.
- ಏಪ್ರಿಲ್ 22ರವರೆಗೆ ಬುಕ್ ಮಾಡಿದ ಪ್ರಯಾಣಿಕರಿಗೆ ಏಪ್ರಿಲ್ 30ರವರೆಗೆ ರದ್ದತಿ ಅಥವಾ ಬದಲಾವಣೆಗೆ ಶುಲ್ಕವಿಲ್ಲದಂತೆ ವಿನಾಯಿತಿ ನೀಡಲಾಗಿದೆ.
ಏರ್ ಇಂಡಿಯಾ ಹೆಚ್ಚುವರಿ ವಿಮಾನಗಳು ಮತ್ತು ಮರುಪಾವತಿ ನೀತಿ
- ಏರ್ ಇಂಡಿಯಾ ಕೂಡಾ ಶ್ರೀನಗರದಿಂದ ದೆಹಲಿ ಮತ್ತು ಮುಂಬೈಗೆ ಎರಡು ಹೆಚ್ಚುವರಿ ವಿಮಾನಗಳನ್ನು ಏಪ್ರಿಲ್ 23ರಂದು ಶುರುಮಾಡಿದೆ.
- ಈ ಮಾರ್ಗಗಳಲ್ಲಿ ಏಪ್ರಿಲ್ 30ರವರೆಗೆ ಇರುವ ಬುಕ್ ಮಾಡಿರುವ ಎಲ್ಲಾ ಪ್ರಯಾಣಿಕರಿಗೆ ಪ್ರವಾಸದ ಬದಲಾವಣೆಗೆ ಮತ್ತು ಸಂಪೂರ್ಣ ಮರುಪಾವತಿ ನೀಡಲಾಗುತ್ತದೆ.