ಮಧ್ಯಪ್ರದೇಶ ಹೋಗ್ಬೇಕು ಅನ್ಕೊಂಡಿದ್ರೆ ಈ ಜಾಗಗಳಿಗೆ ಹೋಗೋದು ಮರಿಬೇಡಿ!
ಮಧ್ಯಪ್ರದೇಶದಲ್ಲಿ ಹತ್ತಾರು ಪ್ರವಾಸಿ ಆಕರ್ಷಣೆಯ ತಾಣಗಳಿವೆ. ಪ್ರವಾಸಿಗರು ತಪ್ಪದೇ ಮಧ್ಯಪ್ರದೇಶದ ಕೆಲವು ಜಾಗಗಳಿಗೆ ಹೋಗಲೇಬೇಕು.
ಮಧ್ಯಪ್ರದೇಶದಲ್ಲಿ ಆಕರ್ಷಕ ಪ್ರವಾಸಿ ತಾಣಗಳಿವೆ. ಪ್ರವಾಸ ಹೋಗಲು ಬಯಸುವವರು ಒಂದು ವಾರವಾದರೂ ಬಿಡುವು ಮಾಡಿಕೊಂಡು ಮಧ್ಯಪ್ರದೇಶದ ಹತ್ತಾರು ಜಾಗಗಳಿಗೆ ಭೇಟಿಕೊಡಬೇಕು. ಪುರಾತನ ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳು ಸೇರಿದಂತೆ ಇಲ್ಲಿ ಹತ್ತಾರು ಜಾಗಗಳಿವೆ. ಜನರು ಇಲ್ಲಿನ ಆಕರ್ಷಣೆಗಳನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಮೂಲೆಗಳಿಂದ ಬರುತ್ತಾರೆ. ವಿದೇಶಿಗರೂ ಮಧ್ಯಪ್ರದೇಶದಲ್ಲಿನ ಪ್ರವಾಸಿ ತಾಣದ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಪ್ರವಾಸಿಗರು ಭವ್ಯವಾದ ದೇವಾಲಯಗಳು, ಪವಿತ್ರ ನದಿಗಳು ಮತ್ತು ಶತಮಾನದ ಕತೆಗಳನ್ನು ಹೇಳುವ ಸ್ಮಾರಕಗಳನ್ನು ತಪ್ಪದೇ ನೋಡಬೇಕು. ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯ, ಖಜುರಾಹೊದ ಅತೀಂದ್ರಿಯ ಕೆತ್ತನೆಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಮಧ್ಯಪ್ರದೇಶದ ಕೆಲವು ಪ್ರಮುಖ ಸ್ಥಳಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಸಾಂಚಿ
ಮಧ್ಯಪ್ರದೇಶದಲ್ಲಿ ಸಾಂಚಿ ತಾಣವು ಪ್ರಮುಖ ಆಕರ್ಷಣೆಯಾಗಿದೆ. ಯುನೆಸ್ಕೋದ ವಿಶ್ವ ಪರಂಪರೆಯ ತಾಣ ಎಂದೂ ಗುರುತಿಸಿಕೊಂಡಿದೆ. ಸಾಂಚಿಯಲ್ಲಿ ಅದ್ಭುತವಾದ ಸಾಂಚಿ ಸ್ತೂಪವಿದೆ. ಇದು ಭಾರತದ ಆರಂಭಿಕ ಕಲ್ಲಿನ ಕಟ್ಟಡಗಳಲ್ಲಿ ಒಂದು ಎನ್ನಲಾಗುತ್ತದೆ. ಈ ಸ್ತೂಪವು ಬೌದ್ಧ ಕಲೆ ಮತ್ತು ವಾಸ್ತುಶಿಲ್ಪವನ್ನು ಒಳಗೊಂಡಿದ್ದು, ಜಗತ್ತಿನ ಎಲ್ಲಾ ಬೌದ್ಧರನ್ನು ಸೆಳೆಯುತ್ತದೆ. ಇದು ಬೌದ್ಧ ಧರ್ಮದವರಿಗೆ ಅತ್ಯಂತ ಪವಿತ್ರ ಯಾತ್ರಾ ಸ್ಥಳವಾಗಿದೆ. ಸಾಂಚಿ ಸ್ತೂಪದಲ್ಲಿರುವ ಅತ್ಯಂತ ಮಹತ್ವದ ತಾಣಗಳಲ್ಲಿ ಗ್ರೇಟ್ ಬೌಲ್ ಕೂಡ ಒಂದು.

ಖಜುರಾಹೊ
ಮಧ್ಯಪ್ರದೇಶದಲ್ಲಿರುವ ಮತ್ತೊಂದು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದರೆ ಅದು ಖಜುರಾಹೊ. ಇದು ತನ್ನ ವಿಶೇಷ ವಾಸ್ತುಶಿಲ್ಪದ ಕಾರಣ ಜಗತ್ತಿನ ಪ್ರವಾಸಿಗ ರನ್ನು ತನ್ನತ್ತ ಸೆಳೆಯುತ್ತದೆ. ಖಜುರಾಹೊ ತನ್ನ ವಿಶಿಷ್ಟ ಮತ್ತು ಸುಂದರ ಶಿಲ್ಪಗಳ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಸ್ಮಾರಕವು ಭಾರತದ ಶ್ರೀಮಂತ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ. ವಿಶೇಷವಾದ ಚಂಡೇಲಾ ಕಲೆಗೆ ಈ ತಾಣವು ಸಾಕ್ಷಿಯಾಗಿದ್ದು, ಪೌರಾಣಿಕ ಪ್ರಾಮುಖ್ಯತೆಯನ್ನು ಹೊಂದಿದೆ.

ಅಮರಕಂಟಕ್
ತೀರ್ಥಯಾತ್ರೆಯ ತಾಣವಾಗಿ ಅಮರಕಂಟಕ್ ಖ್ಯಾತಿಪಡೆದಿದೆ. ಅದು ಮೈಕಲ್ ಬೆಟ್ಟಗಳಲ್ಲಿ ನೆಲೆಸಿರುವ ಪ್ರಸಿದ್ಧವಾದ ಧಾರ್ಮಿಕ ಸ್ಥಳವಾಗಿದೆ. ಹಚ್ಚ ಹಸಿರನ ಕಾಡಿನ ನಡುವೆ ಇದು ನೆಲೆಸಿದೆ. ಅಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಮನಮೋಹಕ ಜಲಪಾತಗಳಿವೆ. ಅಲ್ಲಿ ಅಧ್ಯಾತ್ಮಿಕತೆಯ ವಾತಾವರಣವಷ್ಟೇ ಇಲ್ಲ. ರೋಮಾಂಚನಕಾರಿ ಅನುಭವ ನೀಡುವ ವಾತಾವರಣವೂ ಇದೆ. ಚಾರಣ ಪ್ರಿಯರಿಗೂ ಇದು ಹೇಳಿ ಮಾಡಿಸಿದ ಜಾಗವಾಗಿದೆ. ಮಧ್ಯಪ್ರದೇಶ ಹೋಗುವ ಪ್ರವಾಸಿಗರು ತಪ್ಪದೇ ಅಮರಕಂಟಕ್ಗೆ ಭೇಟಿ ನೀಡಬೇಕು.

ಪ್ರಮುಖ ದೇವಾಲಯಗಳು
ಮಧ್ಯಪ್ರದೇಶದಲ್ಲಿ ಹತ್ತಾರು ಪುರಾಣ ಪ್ರಸಿದ್ಧ ದೇವಾಲಯಗಳಿವೆ. ಪ್ರತಿ ದೇವಾಲಯಕ್ಕೂ ಅದರದ್ದೇ ಇತಿಹಾಸವಿದೆ.
ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯ: ಈ ದೇವಾಲಯವು ಉಜ್ಜಯಿನಿಯಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯ. ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
ಓಂಕಾರೇಶ್ವರ ದೇವಸ್ಥಾನ: ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಓಂಕಾರೇಶ್ವರ ಆಲಯದಲ್ಲಿರುವ ಲಿಂಗವು ಒಂದು. ಇದು ಸಾಂಪ್ರದಾಯಿಕ ಮತ್ತು ಆಧುನಿಕ ವಾಸ್ತುಶೈಲಿಯಿಂದಾಗಿ ಎಲ್ಲರನ್ನು ಆಕರ್ಷಿಸುತ್ತದೆ.