ಪಶ್ಚಿಮ ಬಂಗಾಳದಿಂದ ಹೊಸ ಎಕ್ಸ್ಪ್ರೆಸ್ ಆರಂಭ
ಪಶ್ಚಿಮ ಬಂಗಾಳದ ಸಾರಿಗೆ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ ಈ ಯೋಜನೆ. ಆಧುನಿಕ ತಂತ್ರಜ್ಞಾನ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಪೂರ್ವ ಭಾರತವನ್ನು ದೇಶದ ಉಳಿದ ಭಾಗಗಳೊಂದಿಗೆ ವೇಗವಾಗಿ ಮತ್ತು ಸುರಕ್ಷಿತವಾಗಿ ಜೋಡಿಸಲಿದೆ.
ಪೂರ್ವ ಭಾರತದ ರೈಲ್ವೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳವು ಪುರುಲಿಯಾ-ದೆಹಲಿ ಎಕ್ಸ್ಪ್ರೆಸ್ ರೈಲ್ಗೆ ಚಾಲನೆ ನೀಡಿದೆ. ಇದು ರೈಲ್ವೆ ನಿಲ್ದಾಣಗಳ ಆಧುನೀಕರಣ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಜಾರಿಗೆ ತಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಭಾಗವೂ ಆಗಿದೆ.
ಈ ಹೊಸ ರೈಲು ಪಶ್ಚಿಮ ಬಂಗಾಳದ ಕೈಗಾರಿಕಾ ಮತ್ತು ಬುಡಕಟ್ಟು ಪ್ರಾಬಲ್ಯದ ಪುರುಲಿಯಾ ಜಿಲ್ಲೆಯನ್ನು ದೇಶದ ರಾಜಧಾನಿ ದೆಹಲಿಗೆ ನೇರವಾಗಿ ಸಂಪರ್ಕಿಸುತ್ತದೆ. ಇದು ಈ ಭಾಗದ ಸಾವಿರಾರು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ದೂರ ಪ್ರಯಾಣ ಮಾಡಬಹುದಾಗಿದೆ.
ಇದನ್ನೂ ಓದಿ: ಅಮೃತ್ ಭಾರತ್, ಎಕ್ಸ್ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ
ಪುರುಲಿಯಾ ಸೇರಿದಂತೆ ಪೂರ್ವ ಭಾರತದ ಹಲವು ಪ್ರಮುಖ ರೈಲ್ವೆ ನಿಲ್ದಾಣಗಳನ್ನು 'ಅಮೃತ್ ಭಾರತ್' ಯೋಜನೆಯಡಿ ಪುನರ್ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ವಿಮಾನ ನಿಲ್ದಾಣದ ಮಾದರಿಯ ಕಾಯುವ ಕೊಠಡಿಗಳು, ಕೆಫೆಟೇರಿಯಾಗಳು, ವೈ-ಫೈ ಸೌಲಭ್ಯ ಮತ್ತು ಸುಸಜ್ಜಿತ ಪ್ರವೇಶ ದ್ವಾರಗಳು ಸೇರಿವೆ. ಹೆಚ್ಚಿನ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಹಳಿಗಳನ್ನು ವಿಸ್ತರಿಸಲಾಗುತ್ತಿದೆ. ಈ ಹೊಸ ಅಪ್ಡೇಟ್ನ ಅತ್ಯಂತ ಪ್ರಮುಖ ಅಂಶವೆಂದರೆ 'ಕವಚ' ತಂತ್ರಜ್ಞಾನವನ್ನು ಅಳವಡಿಸಲಿಗಿದೆ. ಚಾಲಕರು ಸಿಗ್ನಲ್ ಗಮನಿಸಲು ವಿಫಲವಾದರೆ ಅಥವಾ ಮಾನವ ತಪ್ಪುಗಳು ಸಂಭವಿಸಿದರೆ, 'ಕವಚ' ತಂತ್ರಜ್ಞಾನವು ಸ್ವಯಂಚಾಲಿತವಾಗಿ ಬ್ರೇಕ್ ಹಾಕುವ ಮೂಲಕ ಅಪಘಾತಗಳನ್ನು ತಪ್ಪಿಸುತ್ತದೆ.