ಅಂತಾರಾಷ್ಟ್ರೀಯ ಕ್ರೂಸ್ಗೆ ಒತ್ತು: ಪ್ರವಾಸೋದ್ಯಮ ಇಲಾಖೆ
ಬಂದರು ನಗರಗಳಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಕ್ರೂಸ್ ಲೈನರ್ಗಳನ್ನು ಆಕರ್ಷಿಸಲು ಕಾರ್ಯತಂತ್ರ ರೂಪಿಸುವಂತೆ ಸೂಚನೆ.
ರಾಜ್ಯವು ಸಮಗ್ರ ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026 ಅನ್ನು ಸಿದ್ಧಪಡಿಸುತ್ತಿದ್ದು, ಬಂದರು ನಗರಗಳಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಕ್ರೂಸ್ ಲೈನರ್ಗಳನ್ನು ಆಕರ್ಷಿಸಲು ಕಾರ್ಯತಂತ್ರ ರೂಪಿಸುವಂತೆ ಅಧಿಕಾರಿಗಳಿಗೆ ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರು ನಿರ್ದೇಶನ ನೀಡಿದರು.

ಕೈಗಾರಿಕಾ ಅವಶ್ಯಕತೆಗಳ ಕುರಿತು ಪ್ರಮುಖ ಕ್ರೂಸ್ ನಿರ್ವಾಹಕರೊಂದಿಗೆ ಸಮಾಲೋಚಿಸುವಂತೆ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ರೂಸ್ ಪ್ರಯಾಣಿಕರು ರಾಜ್ಯದಲ್ಲಿ ಹೆಚ್ಚಿನ ಸಮಯ ಕಳೆಯಲು ಪ್ರೋತ್ಸಾಹಿಸಲು ಪ್ರವಾಸೋದ್ಯಮ ಸರ್ಕ್ಯೂಟ್ಗಳಿಗೆ ಒತ್ತು ನೀಡಲಾಯಿತು. ಈ ನೀತಿಯು ಅಭಿವೃದ್ಧಿ ಮತ್ತು ಸುರಕ್ಷತೆ, ಬಲವಾದ ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ಜಲ ಕ್ರೀಡೆಗಳು ಮತ್ತು ಸಾಹಸ ಚಟುವಟಿಕೆಗಳ ಪ್ರಚಾರವನ್ನೂಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.