Sunday, June 15, 2025
Sunday, June 15, 2025

ಶ್ರವಣ ಬೆಳಗೊಳಕ್ಕೆ ಒಮ್ಮೆ ಹೋಗಿ ಬನ್ನಿ...

ಹಾಸನ ಜಿಲ್ಲೆಯಲ್ಲಿರುವ ಶ್ರವಣ ಬೆಳಗೊಳದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಕುಟುಂಬದ ಜೊತೆಗೆ ವೀಕೆಂಡ್‌ ಟ್ರಪ್‌ಗಾಗಿ ಅಲ್ಲಿಗೆ ಹೋಗಬಹುದು.

ರಾಜಧಾನಿ ಬೆಂಗಳೂರಿನಿಂದ ಸರಿ ಸುಮಾರು 144 ಕಿ.ಮೀ ದೂರದಲ್ಲಿರುವ ಶ್ರವಣಬೆಳಗೊಳ ಜೈನರ ಪ್ರಮುಖ ಯಾತ್ರಾಸ್ಥಳವಾಗಿದೆ. ಇದು ಹಾಸನ ಜಿಲ್ಲೆಯಲ್ಲಿದೆ. ಅಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಒಂದು ದಿನದ ಪಿಕ್ನಿಕ್‌ಗೆ ಹೇಳಿ ಮಾಡಿಸಿದಂತಿದೆ. ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಹೋಗಿ ಬರಬಹುದು.

ಶ್ರವಣಬೆಳಗೊಳದಲ್ಲಿರುವ ಬಾಹುಬಲಿಯ ಪ್ರಸಿದ್ಧವಾದ ಹಾಗು ಅತಿ ಎತ್ತರದ ಏಕಶಿಲಾ ಪ್ರತಿಮೆಯು ಇಲ್ಲಿನ ಪ್ರಮುಖ ಆಕರ್ಷಣೆ. ಶ್ರವಣಬೆಳಗೊಳಕ್ಕೆ ಕೇವಲ ಜೈನ ಯಾತ್ರಾರ್ಥಿಗಳು ಮಾತ್ರವಲ್ಲದೆ ಇತರ ಧರ್ಮದ ಜನರು ಕೂಡ ಇಲ್ಲಿಗೆ ಭೇಟಿ ನೀಡುತ್ತಾರೆ. 12 ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಬಾಹುಬಲಿ ಮಹಾಮಸ್ತಾಕಭಿಷೇಕಕ್ಕೆ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ. ಇನ್ನು ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಪ್ರತಿಮೆಯನ್ನು ಹೊರತುಪಡಿಸಿಯೂ ಅನೇಕ ಸುಂದರವಾದ ತಾಣಗಳಿವೆ.

ವಿಂಧ್ಯಗರಿ ಬೆಟ್ಟ
ಶ್ರವಣಬೆಳಗೊಳದ ಪ್ರಮುಖ ಆಕರ್ಷಣೆಗಳಲ್ಲಿ ವಿಂಧ್ಯಗಿರಿ ಬೆಟ್ಟವೂ ಒಂದು. ಗೆಳೆಯರ ಜೊತೆಗೆ ಈ ಸ್ಥಳಕ್ಕೆ ಚಾರಣ ಹೋಗಬಹುದು. ಬೆಟ್ಟದ ಮೇಲಿನ ದೇವಾಲಯವು ಅದ್ಭುತವಾದ ರಾಕ್-ಕಟ್ ವಾಸ್ತುಶಿಲ್ಪದಿಂದ ಕಂಗೊಳಿಸುತ್ತದೆ. ಸುಮಾರು 100 ಕ್ಕೂ ಅಧಿಕ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ಒಳ್ಳೆಯ ಅನುಭವ ಪಡೆಯಬಹುದು. ವಿಶೇಷವೆಂದರೆ ಪ್ರವೇಶದ್ವಾರವನ್ನು ಒಂದೇ ಕಲ್ಲಿನಿಂದ ಮಾಡಲಾಗಿದೆ. ಜಗತ್ತಿನಾದ್ಯಂತ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ವಿಂಧ್ಯಗಿರಿ ಪರ್ವತ


ಶ್ರೀರಾಮ ದೇವರ ಕಟ್ಟೆ ಜಲಪಾತ
ಶ್ರವಣಬೆಳಗೊಳದಲ್ಲಿ ಪ್ರವಾಸಿಗರು ನೋಡಲೇಬೇಕಾದ ಮತ್ತೊಂದು ಅದ್ಭುತ ತಾಣವೆಂದರೆ ಅದು, ಶ್ರೀ ರಾಮದೇವರ ಕಟ್ಟೆ ಜಲಪಾತ. ಈ ಜಲಪಾತವು ತನ್ನದೇ ಆದ ರಮಣೀಯ ಸೌಂದರ್ಯವನ್ನು ಹೊಂದಿದೆ. ಇದು ಶ್ರವಣಬೆಳಗೊಳದ ಸಮೀಪವಿರುವ ಪ್ರಸಿದ್ಧ ಜಲಪಾತವು ಹೌದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪಿಕ್ನಿಕ್‌ಗೆ ಬರಬಹುದು. ಪ್ರಶಾಂತವಾದ ತಾಣದಲ್ಲಿ ಜೋರಾಗಿ ಧುಮ್ಮಿಕ್ಕುವ ಜಲಧಾರೆಯನ್ನು ನೋಡುವುದೇ ಸೋಜಿಗ.

ಕಟ್ಟೆ ಜಲಪಾತ

ಚಂದ್ರಗಿರಿ ಬೆಟ್ಟ
ಶ್ರವಣಬೆಳಗೊಳದ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಈ ಚಂದ್ರಗಿರಿ ಬೆಟ್ಟಗಳು ಕೂಡ ಸೇರಿವೆ. ಈ ಸ್ಥಳವು ವರ್ಷವಿಡೀ ಪ್ರವಾಸಿಗರನ್ನು ಸೆಳೆಯುತ್ತದೆ. ಸ್ನೇಹಿತರ ಜೊತೆ ಈ ತಾಣಕ್ಕೆ ಭೇಟಿ ನೀಡಿದರೆ ಅದು ಒಳ್ಳೆಯ ನೆನಪಾಗಿ ಉಳಿಯುತ್ತದೆ. ಬೆಟ್ಟದ ಮೇಲೆ ಪ್ರಶಾಂತವಾದ ವಾತಾವರಣ ಆವರಿಸಿದೆ. ಒತ್ತಡದಿಂದ ದೂರವಾಗಲು ಶಾಂತಿ, ನೆಮ್ಮದಿ ಪಡೆಯಲು ಈ ಚಂದ್ರಗಿರಿ ಬೆಟ್ಟಕ್ಕೆ ಹೋಗಿ ಚಿಲ್‌ ಆಗಿ ಬರಬಹುದು.

ಚಂದ್ರಗಿರಿ ಬೆಟ್ಟ


ಬಂಡೀಪುರ ನ್ಯಾಷನಲ್‌ ಪಾರ್ಕ್
ಶ್ರವಣಬೆಳಗೊಳದಿಂದ ಬಂಡೀಪುರ ನ್ಯಾಷನಲ್ ಪಾರ್ಕ್‌‌ ಸರಿ ಸುಮಾರು 159 ಕಿ.ಮೀ ದೂರದಲ್ಲಿದೆ. ಗೆಳೆಯರ ಜೊತೆ ಸಫಾರಿ ಕೈಗೊಳ್ಳಬಹುದು. ಇದು ಭಾರತದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿದ್ದು, ವೈವಿಧ್ಯಮಯ ಪ್ರಾಣಿ ಸಂಕುಲವಿದೆ. ಮುಖ್ಯವಾಗಿ ಕಾಡೆಮ್ಮೆ, ಕರಡಿ, ಕಾಡು ಆನೆ, ಜಿಂಕೆ, ಕಾಡು ಹಂದಿ, ಚಿರತೆ, ಸರಿಸೃಪಗಳು ಸೇರಿದಂತೆ ಇನ್ನು ಸಾಕಷ್ಟು ವಿವಿಧ ಪ್ರಾಣಿಗಳು ಇಲ್ಲಿವೆ. ಅವುಗಳನ್ನು ನೋಡುವುದೇ ಚಂದ.

ಬಂಡೀಪುರ

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..