Saturday, March 7, 2026
Saturday, March 7, 2026

ಕುದುರೆ ಮುಖದ ಮೇಲೇರಿ!

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆ ಮುಖಕ್ಕೆ ಟ್ರೆಕ್ಕಿಂಗ್‌ ಹೋಗುವುದೆಂದರೆ ಅದು ಬ್ರೆತ್‌ಟೇಕ್ಕಿಂಗ್‌ ಅನುಭವ. ಈ ದಾರಿಯಲ್ಲಿನ ಭೂಪ್ರದೇಶ, ಕಾಡುಗಳು, ಹುಲ್ಲುಗಾವಲುಗಳು, ಝರಿಗಳು, ಇವೆಲ್ಲವನ್ನೂ ಪೀಕ್‌ನಲ್ಲಿ ನಿಂತು ನೋಡಬೇಕು. ಕೈಯಲ್ಲಿ ಮೂರು ಗೇಣು ಲೆಕ್ಕ ಹಾಕಿದಾಗ ಸ್ವರ್ಗವೇ ನನ್ನ ಹತ್ರ ಇದೆಯೇನೋ ಅನಿಸುವಷ್ಟು ಸುಂದರ ಈ ಕುದುರೆಮುಖ ಟ್ರೆಕ್‌. ಕುದುರೆಮುಖದಲ್ಲಿ ತುಂಗಾ, ಭದ್ರಾ, ನೇತ್ರಾವತಿ ನದಿಗಳು ಉಗಮವಾಗುತ್ತವೆ. ಕಾಫಿ, ಏಲಕ್ಕಿ ಅಡಿಕೆ ಬೆಳೆಗಳೂ ಇಲ್ಲಿ ಫೇಮಸ್‌. ಈ ಸ್ಥಳದ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡುತ್ತಿದ್ದೇವೆ ಅಂದ್ರೆ, ಅದರ ಸಮೀಪದಲ್ಲೇ ಜೆಎಲ್‌ಆರ್‌ ಇರಬಹುದಾ ಅಂತ ಡೌಟ್‌ ಬಂದಿರುತ್ತಲ್ವಾ? ಯೆಸ್‌, ಕುದು

ಆ ಬೆಟ್ಟಗಳು ದೂರದಿಂದ ನೋಡೋದಕ್ಕೆ ಸ್ವಲ್ಪ ಕುದುರೆಯ ಮುಖದ ಥರ ಇದ್ದಿದ್ದಕ್ಕೆ ಅದನ್ನು ಕುದುರೆಮುಖ ಎಂದು ಕರೆಯಲು ಶುರುಮಾಡಿದರು. ಕುದುರೆಮುಖದ ಸ್ಪೆಷಾಲಿಟಿ ಅಂದ್ರೆ, ಅದು ರಾಜ್ಯದ ಎರಡನೇ ಅತ್ಯಂತ ದೊಡ್ಡ ಪೀಕ್‌. ಕುದುರೆಮುಖದ ಬಗ್ಗೆ ಮತ್ತಷ್ಟು ಹೇಳಬೇಕೆಂದರೆ, ಹಳೆಯ ಸಿನಿಮಾಗಳಲ್ಲಿ ಕುದುರೆಮುಖ ಆಗಾಗ ಬರುತ್ತಿತ್ತು. ಪ್ರೇಮಲೋಕ, ಶಾಂತಿ ಕ್ರಾಂತಿಗಳಂಥ ಹಲವಾರು ಸಿನಿಮಾಗಳು ಕುದುರೆಮುಖದಲ್ಲೇ ಶೂಟ್‌ ಆಗಿದ್ದು.

ಕುದುರೆಮುಖವನ್ನು ಹೇಗೆ ಕಂಡು ಹಿಡಿದರು ಗೊತ್ತಾ? 1913ರಲ್ಲಿ ಮೈಸೂರು ಸಂಸ್ಥಾನದ ಭೂವಿಜ್ಞಾನಿಯಾಗಿದ್ದ ಪಿ.ಸಂಪತ್‌ ಅಯ್ಯಂಗಾರ್‌. ಅವರು ಭದ್ರಾ ನದಿಯಿಂದ ಅರೋಳಿಯವರೆಗೂ ಕಬ್ಬಿಣದ ಅದಿರನ್ನು ಅರಸಿ ಹೋಗ್ತಿರ್ತಾರೆ. ಆಗ ಕುದುರೆಯ ಲಾಳಕ್ಕೆ ಕಬ್ಬಿಣ ಚೂರುಗಳು ಅಂಟಿಕೊಳ್ಳೋಕೆ ಶುರುವಾಗುತ್ತೆ. ಕುದುರೆಯ ಕಾಲುಗಳು ಭಾರವಾಗಿ, ಅದು ನಡೆಯೋದೂ ಕಷ್ಟ ಆಗುತ್ತೆ. ಆಗ ಆ ಸ್ಥಳದಲ್ಲಿ ಕಬ್ಬಿಣದ ಅದಿರು ಇರುವುದರ ಬಗ್ಗೆ ಗೊತ್ತಾಗುತ್ತೆ. ಕಬ್ಬಿಣ ಹೇರಳವಾಗಿ ಕುದುರೆಮುಖದಲ್ಲಿ ಸಿಗಲು ಶುರುವಾಗುತ್ತದೆ. ಅದಾದ ಹಲವಾರು ವರ್ಷಗಳವರೆಗೂ ಕುದುರೆಮುಖದಲ್ಲಿ ಭರ್ಜರಿ ಗಣಿಗಾರಿಕೆಯಾಗುತ್ತದೆ. 2006ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಣೆಯಾದ ಮೇಲೆ ಇಲ್ಲಿ ಗಣಿಗಾರಿಕೆ ಸಂಪೂರ್ಣ ಸ್ತಬ್ಧವಾಗುತ್ತದೆ.

New Project (16)

ಗಣಿಗಾರಿಕೆಯನ್ನು ಪಕ್ಕಕ್ಕೆ ಇಟ್ಟರೂ, ಈ ಸ್ಥಳ ರಾಷ್ಟ್ರೀಯ ಉದ್ಯಾನವನ ಮತ್ತು ರಾಜ್ಯದ ಎರಡನೆಯ ಅತಿ ಎತ್ತರದ ಪೀಕ್‌. ಇದು ಟ್ರೆಕ್ಕಿಂಗ್‌ಗೂ ಒಳ್ಳೆಯ ಸ್ಥಳ ಅಲ್ವಾ? ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಸ್ಥಳದಲ್ಲಿ ಟ್ರೆಕ್ಕಿಂಗ್‌ ಹೋಗುವುದೆಂದರೆ ಅದೊಂದು ಬ್ರೆತ್‌ಟೇಕ್ಕಿಂಗ್‌ ಅನುಭವ. ಈ ದಾರಿಯಲ್ಲಿನ ಭೂಪ್ರದೇಶ, ಕಾಡುಗಳು, ಹುಲ್ಲುಗಾವಲುಗಳು, ಝರಿಗಳು, ಇವೆಲ್ಲವನ್ನೂ ಪೀಕ್‌ನಲ್ಲಿ ನಿಂತು ನೋಡಬೇಕು. ಕೈಯಲ್ಲಿ ಮೂರು ಗೇಣು ಲೆಕ್ಕ ಹಾಕಿದಾಗ ಸ್ವರ್ಗವೇ ನನ್ನ ಹತ್ರ ಇದೆಯೇನೋ ಅನಿಸುವಷ್ಟು ಸುಂದರ ಈ ಕುದುರೆಮುಖ ಟ್ರೆಕ್‌. ಕುದುರೆಮುಖದಲ್ಲಿ ತುಂಗಾ, ಭದ್ರಾ, ನೇತ್ರಾವತಿ ನದಿಗಳು ಉಗಮವಾಗುತ್ತವೆ. ಕಾಫಿ, ಏಲಕ್ಕಿ ಅಡಿಕೆ ಬೆಳೆಗಳೂ ಇಲ್ಲಿ ಫೇಮಸ್‌. ಈ ಸ್ಥಳದ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡುತ್ತಿದ್ದೇವೆ ಅಂದ್ರೆ, ಅದರ ಸಮೀಪದಲ್ಲೇ ಜೆಎಲ್‌ಆರ್‌ ಇರಬಹುದಾ ಅಂತ ಡೌಟ್‌ ಬಂದಿರುತ್ತಲ್ವಾ? ಯೆಸ್‌, ಕುದುರೆಮುಖ ಪಟ್ಟಣದಿಂದ ಕೇವಲ 8 ಕಿಮೀ ದೂರದಲ್ಲಿ ಜೆಎಲ್‌ಆರ್‌ ಕ್ಯಾಂಪ್‌ ಇದೆ.

ಭಗವತಿ ನೇಚರ್‌ ಕ್ಯಾಂಪ್‌!

New Project (15)

ದಟ್ಟ ಕಾಡಿನ ನಡುವೆ, ಭದ್ರೆಯ ತಟದಲ್ಲಿ ಸುಂದರ ನೋಟಗಳಿರುವ ಸ್ಥಳದಲ್ಲಿರುವ ಈ ಕ್ಯಾಂಪ್‌ ಆತಿಥ್ಯಕ್ಕೆ ಹೆಸರಾಗಿರುವುದು ಎಲ್ಲರಿಗೂ ಗೊತ್ತು. ಕಳಸ ಮೇನ್‌ ರೋಡ್‌ನಿಂದ ಕೇವಲ ಅರ್ಧ ಕಿಲೋಮೀಟರ್‌ ದೂರವಿರುವ ಈ ಸ್ಥಳಕ್ಕೆ ಭೇಟಿ ಕೊಡದಿದ್ದರೆ, ಪ್ರಕೃತಿಯನ್ನು ಅನುಭವಿಸುವ ಒಳ್ಳೆಯ ಸಮಯವನ್ನು ಕಳೆದುಕೊಂಡ ಹಾಗೆ!

ಸಾಹಸವನ್ನು ಇಷ್ಟ ಪಡುವವರಿಗೆ, ಭಗವತಿ ನೇಚರ್‌ ಕ್ಯಾಂಪ್‌ ಸಾಹಸಮಯ ಟ್ರೆಕ್ಕಿಂಗ್ಗಳನ್ನು ಮಾಡುವ ಅವಕಾಶ ನೀಡುತ್ತದೆ. ಕುದುರೆಮುಖ ಅರಣ್ಯ ಇಲಾಖೆಯ ವತಿಯಿಂದ ಬೆಳಗ್ಗೆ ಮತ್ತು ಸಂಜೆ ನಮ್ಮ ನೇಚರ್‌ ವಾಕ್‌ ಗೆ, ಜತೆಯಲ್ಲಿ ಬರುವ ಮಾರ್ಗದರ್ಶಿಗಳು ಕಾಡಿನ ಬಗ್ಗೆ, ಅಲ್ಲಿನ ಪ್ರಾಣಿಗಳ ಬಗ್ಗೆ ಗೊತ್ತಿರದ ಹಲವಾರು ವಿಚಾರಗಳನ್ನು ತಿಳಿಸುತ್ತಾರೆ. ಹಾಗೆ ಕಾಲುದಾರಿಗಳಲ್ಲಿ ನಮ್ಮ ನಡಿಗೆಯನ್ನು ಶುರು ಮಾಡಿದ ಮೇಲೆ, ನೂರಾರು ಬಗೆಯ ಪಕ್ಷಿಗಳ ಚಿಲಿಪಿಲಿಯ ಇಂಚರಕ್ಕೆ ಕಿವಿ ಒಳಪಡುತ್ತದೆ. ಹಾಗೆ ಬಣ್ಣ ಬಣ್ಣ ಚಿಟ್ಟೆಗಳ ಚೆಲುವು ಕಣ್ಣಿಗೆ ತಂಪನ್ನು ನೀಡುತ್ತದೆ. ಪಕ್ಷಿ ವೀಕ್ಷಣೆ ಮಾಡುವವರಿಗಂತೂ ಈ ಸ್ಥಳ ಪ್ರಶಸ್ತ. ಏಕೆಂದರೆ, ನೇಚರ್‌ವಾಕ್‌ನಲ್ಲಿ ಹಲವಾರು ಪ್ರಭೇದದ ಪಕ್ಷಿಗಳು, ಹಲವಾರು ಪ್ರಾಣಿ ಸಂಕುಲಗಳು ನಿಮಗೆ ಹಾಯ್‌ ಹೇಳಲು ಸಿದ್ಧವಾಗಿರುತ್ತದೆ. ಸುಮ್ಮನೆ ಕ್ಯಾಮೆರಾದಲ್ಲಿ ಅವುಗಳ ಒಳ್ಳೊಳ್ಳೆ ಫೊಟೋಗಳನ್ನು ಕ್ಲಿಕ್ಕಿಸಿಕೊಂಡು ಬರಬಹುದು. ಇಲ್ಲಿ ಮಲಬಾರ್‌ ಟ್ರೊಗನ್‌, ಮಲಬಾರ್ ವಿಸ್ಲಿಂಗ್ ಥ್ರಷ್, ಗ್ರೇಟ್ ಪೈಡ್ ಹಾರ್ನ್‌ಬಿಲ್, ಇಂಪೀರಿಯಲ್ ಪಿಜನ್ ಮತ್ತು ಇನ್ನೂ ಹಲವಾರು ಪಕ್ಷಿಗಳು ನಿಮಗೆ ದರ್ಶನ ನೀಡುತ್ತವೆ. ಕುದುರೆಮುಖ ಪೀಕ್‌ಗೆ ಜೀಪ್‌ ನಲ್ಲಿಯೂ ಹೋಗಿ ಸಮಯ ಕಳೆಯಬಹುದು. ಇದೆಲ್ಲವೂ ನೀವು ಮಾಡಲೇಬೇಕಾದ ಕೆಲವು ಚಟುವಟಿಕೆಗಳು.

New Project (19)

ನಿಶ್ಶಬ್ದದ ಭದ್ರಾ ನದಿಯನ್ನು ಎಕ್ಸ್‌ಪ್ಲೋರ್‌ ಮಾಡಲೇಬೇಕು. ಇಲ್ಲಿ ಈಜಾಡುವುದಕ್ಕೆ ಅನುಮತಿಯಿಲ್ಲದಿದ್ದರೂ, ನೀರಿನ ದಡದಲ್ಲಿ ನಡೆಯುತ್ತಾ ಸಾಗಬಹುದು. ಏಕೆಂದರೆ, ಇದು ಈಜಾಡುವುದಕ್ಕಿಂತ ನಡೆಯುವುದಕ್ಕೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿ ಆಟ ಆಡಲು, ಬೇರೆ ಹಲವಾರು ಚಟುವಟಿಕೆಗಳನ್ನು ಮಾಡಲು ಸ್ಥಳವೂ ಇದೆ. ಸಂಜೆಯಲ್ಲಿ ಒಂದು ಕಪ್‌ ಟೀ ಅಥವಾ ಕಾಫೀ ಕುಡಿಯುತ್ತ, ಜೆಎಲ್‌ಆರ್‌ನ ಮಾರ್ಗದರ್ಶಿಗಳ ಜತೆ ಹರಟುತ್ತ 4ಕಿಮೀ ಗಿಂತಲೂ ದೂರ ಪಕ್ಷಿ ವೀಕ್ಷಣೆಗೆ ಹೋಗಬಹುದು. ನಿಮಗೆ ನಡೆಯಲು ಇಷ್ಟವಿದ್ದರೆ 7 ಕಿಮೀ ದೂರಕ್ಕೂ ಹೋಗಬಹುದು. ಇಲ್ಲಿನ ಮಾರ್ಗದರ್ಶಕರು ಸುಸ್ತಾಗಲ್ಲ, ನೀವು ಸುಸ್ತಾಗಬಾರದು ಅಷ್ಟೇ! ಆದರೆ, ಈ ನಡಿಗೆಯಲ್ಲಿ ಬ್ಯಾಣ (Open Space), ಕಾಡಿನ ಕಾಲುದಾರಿ, ಕೆಲವೊಮ್ಮೆ ಚಾಲೆಂಜ್‌ ಮಾಡುವಂಥ ದಾರಿಗಳು ಸಿಗುತ್ತವೆ. ಇಲ್ಲಿಗೆ ಹೋಗಬೇಕಾದರೆ, ಜಿಗಣೆಗಳು ಅಟ್ಯಾಕ್‌ ಮಾಡುತ್ತವೆ. ರಕ್ತದಾನ ಇಷ್ಟವಿರದಿದ್ದರೆ, ಸರಿಯಾಗಿ ಸಿದ್ಧರಾಗಿಯೇ ಹೊರಡಬೇಕು. ಮಾರ್ಗದರ್ಶಿಗಳ ನಡಿಗೆಯಲ್ಲಿ ಹಲವಾರು ಆಯ್ಕೆಗಳಿವೆ. ನಿಮಗೆ ಬೇಕಾದ ಯಾವುದಾದರೂ ಒಂದು ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಕುರಿಂಜಲ ಪೀಕ್‌ ಅನ್ನು ನಾವು ರೆಕಮೆಂಡ್‌ ಮಾಡುತ್ತೇವೆ.

ಊಟ ವಸತಿ

ಭಗವತಿ ನೇಚರ್‌ ಕ್ಯಾಂಪ್‌ನಲ್ಲಿ ಊಟ ವಸತಿಯ ಬಗ್ಗೆ ಪ್ರಶ್ನೆಯೇ ಬೇಡ. ರಾಜ್ಯದಲ್ಲಿ ಟಾಪ್‌ ನಾಚ್‌ ಆದ ಆತಿಥ್ಯ ಸಿಗೋದು ಜೆಎಲ್‌ಆರ್‌ನಲ್ಲಿ. ನೆನಪಿನಲ್ಲಿಡುವಂಥ ಆರಾಮದಾಯಕ ಸ್ಟೇಯನ್ನು ನಾವಿಲ್ಲಿ ಅನುಭವಿಸಬಹುದು. ಕಾಡಿನ ಮಧ್ಯದಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ಟೆಂಟ್‌ ಮತ್ತು ಕಾಟೇಜ್‌ಗಳು, ಅದರ ಜತೆಗೆ ಪ್ರೈವೆಸಿಯಲ್ಲಿ ರಾಜಿಯೂ ಇರುವುದಿಲ್ಲ. ಯಾವುದೇ ರಾಸಾಯನಿಕಗಳನ್ನು ಬಳಸದ ಸ್ಥಳೀಯವಾಗಿ ಖರೀದಿಸಿದ ತರಕಾರಿಗಳನ್ನು ಬಳಸಿ ಆಹಾರವನ್ನು ತಯಾರಿಸುತ್ತಾರೆ. ಇಲ್ಲಿನ ಊಟ ಮಲೆನಾಡಿನ ಸೊಬಗು ಆಹಾರದ ರುಚಿಯನ್ನು ಮರೆಯದಂತೆ ಮಾಡುತ್ತದೆ.

ಭಗವತಿ ನೇಚರ್‌ ಕ್ಯಾಂಪ್‌ನಲ್ಲಿರುವ ವಿಶಾಲವಾದ ರೂಮ್‌ಗಳು ಅತಿಥಿಗಳಿಗೆ ಆರಾಮದಾಯಕವಾಗಿ, ವಿಶ್ರಾಂತಿಯನ್ನೂ ನೀಡುತ್ತದೆ. ಆದರೆ, ಕೆಲವೊಮ್ಮೆ ಸೋಲಾರ್‌ ಬ್ಯಾಟರಿಯ ಸಮಸ್ಯೆಯಿಂದಾಗಿ ಅಪರೂಪಕ್ಕೊಮ್ಮೆ ವಿದ್ಯುತ್‌ ಹೆಚ್ಚು ಕಡಿಮೆಯಾಗಬಹುದು. ಇದೊಂದು ನ್ಯೂನತೆಯಾಗಿದ್ದರೂ, ಆಧುನಿಕ ತಂತ್ರಜ್ಞಾನಗಳಿಂದ ನಿಮ್ಮನ್ನು ಸ್ವಲ್ಪ ದೂರ ಸರಿಸಿ, ನಿಮ್ಮ ಸ್ನೇಹಿತರು ಅಥವಾ ಪ್ರೀತಿ ಪಾತ್ರರ ಜತೆ ಸಮಯ ಕಳೆಯಲು ಅನುವು ಮಾಡುತ್ತದೆ. ಪ್ರಕೃತಿಯಂತೂ ನಿಮ್ಮೊಂದಿಗೆ ಇದ್ದೇ ಇದೆ.

ಸೀಸನ್‌

New Project (18)

ಚಳಿಗಾಲವು ಭಗವತಿ ಪ್ರಕೃತಿ ಶಿಬಿರಕ್ಕೆ ಭೇಟಿ ನೀಡಲು ಸರಿಯಾದ ಸಮಯ, ತಾಪಮಾನವು 10°C ನಿಂದ 25°C ವರೆಗೆ ಇರುತ್ತದೆ. ಈ ಋತುವಿನಲ್ಲಿ ಸ್ಪಷ್ಟವಾದ ಆಕಾಶ, ಪ್ರಕೃತಿ ನಡಿಗೆ, ಪಕ್ಷಿ ವೀಕ್ಷಣೆ ಮತ್ತು ಚಾರಣದಂಥ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸೂಕ್ತವಾದ ವಾತಾವರಣವನ್ನು ನೀಡುತ್ತದೆ.

ಕುದುರೆಮುಖ ಮಳೆಗಾಲದಲ್ಲಿ ಭಾರೀ ಮಳೆಯಾಗುವುದರಿಂದ ಹಲವಾರು ಜಲಪಾತಗಳು ಮತ್ತು ತೊರೆಗಳು ಹುಟ್ಟಲು ಶುರುವಾಗುತ್ತದೆ. ನೀವು ಹೋಗುವ ದಾರಿಯನ್ನೆಲ್ಲ ಹಚ್ಚ ಹಸಿರಿನ ಸ್ವರ್ಗವನ್ನಾಗಿ ಪರಿವರ್ತಿಸುತ್ತದೆ. ಅದಾಗ್ಯೂ, ಮಳೆ ಮತ್ತು ಜಾರು ಭೂಪ್ರದೇಶಗಳಿಂದಾಗಿ ಹೊರಾಂಗಣ ಚಟುವಟಿಕೆಗಳು ಕಡಿಮೆಯಾಗಬಹುದು. ಈ ಸಮಯದಲ್ಲಿ ನಿಮ್ಮ ಪ್ರವಾಸ ಸುಸೂತ್ರವಾಗಿರಲಿ ನೀರಿನ ಬಾಟಲಿ, ತಿಂಡಿಗಳು, ಕೋಲು, ಜಿಗಣೆಗಳಿಗೆ ಉಪ್ಪು, ರೇನ್‌ಕೋಟ್ ಮತ್ತು ಔಟರ್‌ ಪ್ರೂಫ್‌ ಸಾಕ್ಸ್‌ಗಳಂಥ ಅಗತ್ಯ ವಸ್ತುಗಳನ್ನು ಕೊಂಡೊಯ್ಯುವುದು ಸೂಕ್ತ.

ಮಳೆಗಾಲವು ತನ್ನದೇ ಆದ ವಿಶಿಷ್ಟ ಮೋಡಿಯನ್ನು ನೀಡುತ್ತದೆಯಾದರೂ, ಈ ಸಮಯದಲ್ಲಿ ಚಾರಣ ಪರಿಸ್ಥಿತಿಗಳು ಹೆಚ್ಚು ಸವಾಲಿನದ್ದಾಗಿರಬಹುದು ಎಂಬುದನ್ನು ತಿಳಿದಿರುವುದು ಮುಖ್ಯ. ಭಾರೀ ಮಳೆ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಅವಧಿಯಲ್ಲಿ ಹಾದಿಯು ಸೀಮಿತವಾಗಿರಬಹುದು ಅಥವಾ ಮುಚ್ಚಲ್ಪಟ್ಟಿರಬಹುದು. ಆದ್ದರಿಂದ, ಹೆಚ್ಚು ಅನುಕೂಲಕರ ಮತ್ತು ಆನಂದದಾಯಕ ಅನುಭವಕ್ಕಾಗಿ, ಹವಾಮಾನವು ಹೆಚ್ಚು ಅನುಕೂಲಕರವಾಗಿರುವ ಮತ್ತು ಜಿಗಣೆಗಳ ಉಪಸ್ಥಿತಿಯು ಕಡಿಮೆ ಇರುವ ಚಳಿಗಾಲದಲ್ಲಿ ನಿಮ್ಮ ಪ್ರವಾಸ ಯೋಜಿಸುವುದು ಉತ್ತಮ. ಅರ್ಥಾತ್ ಇದು ಕುದುರೆಮುಖದ ಕಡೆ ಮುಖ ಮಾಡಲು ಸಕಾಲ.

ಪ್ಯಾಕೇಜ್‌

ಮರದ ಕಾಟೇಜ್ ಪ್ಯಾಕೇಜ್

ಟೆಂಟ್ ಪ್ಯಾಕೇಜ್

ಡಾರ್ಮಿಟರಿ ಪ್ಯಾಕೇಜ್

ಈ ಪ್ಯಾಕೇಜ್‌ನಲ್ಲಿ ವಸತಿ ಸ್ಥಳ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಮಲೆನಾಡು ಶೈಲಿಯಲ್ಲಿ ತಯಾರಿಸಿದ ಉಪಾಹಾರ, ಪ್ರಕೃತಿ ನಡಿಗೆ, ಅರಣ್ಯ ಪ್ರವೇಶ ಶುಲ್ಕಗಳು, ಪಾರ್ಕಿಂಗ್ ಸೌಲಭ್ಯಗಳು, ಹೌಸ್ ಕೀಪಿಂಗ್, ಆಸನ ಪ್ರದೇಶ, ಊಟದ ಹಾಲ್ ಇತ್ಯಾದಿ ಇತರ ಸೌಲಭ್ಯಗಳನ್ನು ಒಳಗೊಂಡಿದೆ.

ದಿನಚರಿ

ಮಧ್ಯಾಹ್ನ 1:00 - ಚೆಕ್-ಇನ್, ಫ್ರೆಶ್ ಅಪ್:

ಆಗಮನದ ನಂತರ, ನೀವು ನಿಮ್ಮ ವಸತಿ ಸೌಕರ್ಯಕ್ಕೆ ಚೆಕ್-ಇನ್ ಮಾಡಿ ಮತ್ತು ಫ್ರೆಶ್ ಅಪ್ ಆಗಿ. ಇದು ನಿಮ್ಮ ವಾಸ್ತವ್ಯಕ್ಕೆ ಆರಾಮದಾಯಕ ಆರಂಭವನ್ನು ನೀಡುತ್ತದೆ.

ಮಧ್ಯಾಹ್ನ 1:30 - 2:30 – ಊಟದ ಸಮಯ

ಸ್ಥಳೀಯ ಪಾಕಪದ್ಧತಿಯ ವಿವಿಧ ರುಚಿಕರವಾದ ಭಕ್ಷ್ಯಗಳನ್ನು ಒಳಗೊಂಡಿರುವ ರುಚಿಕರವಾದ ಮತ್ತು ತೃಪ್ತಿಕರವಾದ ಊಟವನ್ನು ಸವಿಯಿರಿ.

ಸಂಜೆ 4:00 - 4:25 - ಚಹಾ/ಕಾಫಿ ವಿರಾಮ

ಮುಂದಿನ ಚಟುವಟಿಕೆಯ ಮೊದಲು ವಿಶ್ರಾಂತಿ ಪಡೆದು, ಟೀ ಅಥವಾ ಕಾಫಿಯನ್ನು ಸವಿಯಿರಿ.

ಸಂಜೆ 4:30 - ಸಂಜೆ 6:00 - ಪಕ್ಷಿ ವೀಕ್ಷಣೆ:

ಈ ಪ್ರದೇಶದಲ್ಲಿ ವಿವಿಧ ಪಕ್ಷಿ ಪ್ರಭೇದಗಳನ್ನು ಗುರುತಿಸಲು ಮತ್ತು ಗುರುತಿಸಲು ನಿಮಗೆ ಸಹಾಯ ಮಾಡುವ ಮಾರ್ಗದರ್ಶಿ ಸಿಬ್ಬಂದಿಗಳು ಅತ್ಯಾಕರ್ಷಕ ಪಕ್ಷಿ ವೀಕ್ಷಣೆಗೆ ಕರೆದುಕೊಂಡು ಹೋಗುತ್ತಾರೆ.

ರಾತ್ರಿ 8:30 - ರಾತ್ರಿ 9:30 - ಗೋಲ್ ಘರ್‌ನಲ್ಲಿ ಊಟ:

ಗೋಲ್ ಘರ್‌ನಲ್ಲಿ ರುಚಿಕರವಾದ ಊಟದ ಅನುಭವವನ್ನು ಪಡೆಯಿರಿ, ನಿಮ್ಮ ಊಟವನ್ನು ಆನಂದಿಸುತ್ತಿರುವಾಗ, ಸಹ ಅತಿಥಿಗಳು ಮತ್ತು ಸಿಬ್ಬಂದಿಯೊಂದಿಗೆ ಗಾಸಿಪ್‌ ಅಥವಾ ಹರಟೆಯಲ್ಲಿ ನೀವೂ ಭಾಗವಹಿಸಿ, ಕಾಡಿನ ಕಥೆಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಿ.

ಬೆಳಗ್ಗೆ 6:00 - ಬೆಳಗ್ಗೆ 6:15 - ಎಚ್ಚರ/ಚಹಾ/ಕಾಫಿ:

ಬೆಳಗಿನ ಉಲ್ಲಾಸಕರ ವಾತಾವರಣಕ್ಕೆ ಎಚ್ಚರಗೊಳ್ಳುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಒಂದು ಕಪ್ ಚಹಾ ಅಥವಾ ಕಾಫಿಯನ್ನು ಆನಂದಿಸಿ, ಇದು ನಿಮ್ಮನ್ನು ಚೈತನ್ಯಪೂರ್ಣಗೊಳಿಸಲು ಮತ್ತು ಮುಂದಿನ ದಿನಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತದೆ.

ಬೆಳಗ್ಗೆ 6:30 - ಬೆಳಗ್ಗೆ 9:30 - ಪ್ರಕೃತಿ ವೀಕ್ಷಣೆ:

ಮತ್ತೊಮ್ಮೆ ನೇಚರ್‌ ವಾಕ್‌

ಬೆಳಗ್ಗೆ 10:00 - 10:15 - ಉಪಾಹಾರ:

ಒಳ್ಳೆ ಉಪಾಹಾರವನ್ನು ಮಾಡಿ, ಹೊಟ್ಟೆಯನ್ನು ಬಿಗಿಪಡಿಸಿಕೊಳ್ಳಿ.

ಬೆಳಗ್ಗೆ 10:30 - ಚೆಕ್ಔಟ್:

ಉಪಾಹಾರದ ನಂತರ, ಚೆಕ್ಔಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಮಯವಾಗಿರುತ್ತದೆ.

ಸಂಪರ್ಕ

ಭಗವತಿ ನೇಚರ್ ಕ್ಯಾಂಪ್,

ಕುದುರೆಮುಖ ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ- 577142

ಮ್ಯಾನೇಜರ್: ಮಂಜುನಾಥ್

ಸಂಪರ್ಕ ಸಂಖ್ಯೆ: 9449597875, 6360940069

ಇಮೇಲ್: bhagavathi@junglelodges.com

ದಾರಿ ಹೇಗೆ?

ರಸ್ತೆಯ ಮೂಲಕ: ಬೆಂಗಳೂರಿನಿಂದ ಕಳಸ, ಸಂಸೆ ಮತ್ತು ಕುದುರೆಮುಖಕ್ಕೆ ಉತ್ತಮ ಮಾರ್ಗ. ಭಗವತಿ ಶಿಬಿರವು ಕುದುರೆಮುಖ-ಕಾರ್ಕಳ ರಸ್ತೆಯಲ್ಲಿ ಕುದುರೆಮುಖದಿಂದ ಸುಮಾರು 11 ಕಿಮೀ ದೂರದಲ್ಲಿದೆ.

ವಿಮಾನದ ಮೂಲಕ: ನೀವು ಬೆಂಗಳೂರಿನಿಂದ (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮಂಗಳೂರಿಗೆ (ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ವಿಮಾನದಲ್ಲಿ ಪ್ರಯಾಣಿಸಬಹುದು ಮತ್ತು ನಂತರ ಬಸ್/ಟ್ಯಾಕ್ಸಿ ಮೂಲಕ ಶಿಬಿರಕ್ಕೆ ತಲುಪಬಹುದು. ಶಿಬಿರವು ಮಂಗಳೂರಿನಿಂದ ಕೇವಲ 90 ಕಿಮೀ ದೂರದಲ್ಲಿದೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..