ಭುವನೇಶ್ವರದಿಂದ ಅಬುಧಾಬಿಗೆ ನೇರ ವಿಮಾನ ಸೇವೆ ಶುರು
ಭುವನೇಶ್ವರ ಮತ್ತು ಅಬುಧಾಬಿ ನಡುವೆ ನೇರ ವಿಮಾನ ಸೇವೆ ಆರಂಭವಾಗಿದೆ
ಒಡಿಶಾ (Odisha) ತನ್ನ ಅಂತಾರಾಷ್ಟ್ರೀಯ ವಿಮಾನ ಸಂಪರ್ಕವನ್ನು (International Flight Connection) ವಿಸ್ತರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದ ವಿಮಾನಯಾನ ಸಂಸ್ಥೆಯಾದ ಇಂಡಿಗೋ (Indigo) , ಭುವನೇಶ್ವರ (Bhuvaneshwar) ಮತ್ತು ಅಬುಧಾಬಿ (Abudhabi) ನಡುವೆ ನೇರ ವಿಮಾನ ಸೇವೆ ಆರಂಭಿಸುತ್ತಿದೆ. ಈ ಸೇವೆ ಪ್ರತಿ ವಾರ ಮಂಗಳವಾರ, ಗುರುವಾರ ಮತ್ತು ಶನಿವಾರ ಕಾರ್ಯನಿರ್ವಹಿಸಲಿದೆ.
ಬಿ-ಮಾನ್ (B-MAAN – Building & Management of Aviation Assets and Network) ಯೋಜನೆಯಡಿ ಈ ಯೋಜನೆ ಮುಂದಾಗಿದ್ದು, ರಾಜ್ಯದ ಆಂತರಿಕ ಹಾಗೂ ಅಂತಾರಾಷ್ಟ್ರೀಯ ವಿಮಾನ ಸಂಪರ್ಕವನ್ನು ಉನ್ನತ ಮಟ್ಟಕ್ಕೆ ತರುವ ಉದ್ದೇಶ ಹೊಂದಿದೆ.
ಈ ಸೇವೆಯು ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BPIA) ಹಾಗೂ ಮಿಡಲ್ ಈಸ್ಟ್ನ ಪ್ರಮುಖ ವ್ಯಾಪಾರ ಮತ್ತು ಪ್ರವಾಸಿ ಕೇಂದ್ರವಾದ ಅಬುಧಾಬಿಯನ್ನು ನೇರವಾಗಿ ಸಂಪರ್ಕಿಸಲಿದೆ. ಸ್ಲಾಟ್ ಮಂಜೂರಾತಿಗೆ ಕಾಯಲಾಗುತ್ತಿರುವುದರಿಂದ ಅಂತಿಮ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿ ಘೋಷಿಸುವ ನಿರೀಕ್ಷೆಯಿದೆ. ಈ ವಿಮಾನ ಮಾರ್ಗವು ಭುವನೇಶ್ವರದಿಂದ ಕಾರ್ಯನಿರ್ವಹಿಸಲಿರುವ ಐದನೇ ಅಂತಾರಾಷ್ಟ್ರೀಯ ಸೇವೆಯಾಗಿದೆ.
ಅಬುಧಾಬಿಗೆ ನೇರ ಸಂಪರ್ಕ ಒಡಿಶಾ ಮತ್ತು ಯುಎಇ ನಡುವೆ ವ್ಯಾಪಾರ, ಪ್ರವಾಸೋದ್ಯಮ ಹಾಗೂ ಜನಸಂಪರ್ಕವನ್ನು ಹೆಚ್ಚು ಬಲಪಡಿಸುವ ಭರವಸೆಯಿದೆ. ಯುಎಇ ಭಾರತಕ್ಕೆ ಪ್ರಮುಖ ವ್ಯಾಪಾರಿಕ ಸಂಗಾತಿಯಾಗಿ, ಅಲ್ಲಿಯ ಭಾರತೀಯ ಸಮುದಾಯ ಕೂಡಾ ದೊಡ್ಡ ಪ್ರಮಾಣದಲ್ಲಿದೆ. ಈ ನೇರ ವಿಮಾನ ಸೇವೆ ಮೂಲಕ ಪ್ರಯಾಣದ ಸಮಯ ಕಡಿಮೆಯಾಗುತ್ತಿದ್ದು, ವ್ಯವಹಾರ ಹಾಗೂ ವೈಯಕ್ತಿಕ ಪ್ರಯಾಣಿಕರಿಗೆ ಸಹಾಯವಾಗಲಿದೆ.
ಒಡಿಶಾದ ಉಡುಪು ಉದ್ಯಮ, ಖನಿಜ ಸಂಪತ್ತು, ಮಾಹಿತಿ ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರಗಳು ಯುಎಇ ಮೂಲಕ ಜಾಗತಿಕ ಮಾರುಕಟ್ಟೆಗೆ ಪ್ರವೇಶ ಪಡೆಯುವ ಸಾಧ್ಯತೆ ಇರುತ್ತದೆ. ಈ ಮೂಲಕ ರಾಜ್ಯದ ರಫ್ತು ಪ್ರಮಾಣ ಹೆಚ್ಚಳವಾಗಲಿದ್ದು, ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರುವ ಸಾಧ್ಯತೆ ಇದೆ.
ಅಬುಧಾಬಿಯಿಂದ ನೇರ ವಿಮಾನ ಸಂಪರ್ಕ ಒಡಿಶಾದ ಪ್ರವಾಸೋದ್ಯಮಕ್ಕೆ ದೊಡ್ಡ ತೊಂದರೆ ನೀಡಲಿದೆ. ಜಗನ್ನಾಥ ದೇವಸ್ಥಾನ, ಕೋಣಾರ್ಕ ಸೂರ್ಯ ಮಂದಿರ, ಗೋಪಾಲಪುರ ಬೀಚ್ ಹೀಗೆ ಅನೇಕ ಧಾರ್ಮಿಕ, ಐತಿಹಾಸಿಕ ಒಡಿಶಾ, ಮಿಡಲ್ ಈಸ್ಟ್ನ ಪ್ರವಾಸಿಗರಿಗೆ ಆಕರ್ಷಕ ಗಮ್ಯಸ್ಥಳವಾಗಲಿದೆ.
ಇದು ಕೇವಲ ವಿಮಾನ ಸೇವೆಯ ಆರಂಭವಲ್ಲ; ಒಡಿಶಾ ತನ್ನ ಮೂಲಸೌಕರ್ಯವನ್ನು ಬಲಪಡಿಸಲು ಕೈಗೊಂಡಿರುವ ಪರಿಣಾಮಕಾರಿ ಹೆಜ್ಜೆ. ಬಿಜು ಪಟ್ನಾಯಕ್ ವಿಮಾನ ನಿಲ್ದಾಣದ ಪ್ರಯಾಣಿಕ ಸಂಖ್ಯೆ ಕಳೆದ ಕೆಲವು ವರ್ಷಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ. ಈ ಹೊಸ ಮಾರ್ಗದೊಂದಿಗೆ ಈ ಬೆಳವಣಿಗೆ ಇನ್ನಷ್ಟು ವೇಗ ಪಡೆಯುವ ನಿರೀಕ್ಷೆಯಿದೆ.
ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಅಂತಾರಾಷ್ಟ್ರೀಯ ಮಾರ್ಗಗಳನ್ನು ಆರಂಭಿಸಲು ಯೋಚಿಸುತ್ತಿದ್ದು, ಭುವನೇಶ್ವರವನ್ನು ಪೂರ್ವ ಭಾರತದ ಅಂತಾರಾಷ್ಟ್ರೀಯ ಗೇಟ್ವೇ ಆಗಿ ರೂಪಿಸುವ ಗುರಿಯನ್ನು ಹೊಂದಿದೆ.