ವಿಲ್ಲಾ ಒಡೆಯರ್ಮಠ್
ಜಿಲ್ಲೆಯಲ್ಲಿ ಹರಿಯುವ ತುಂಗಾ ನದಿಯ ದಡದಲ್ಲಿರುವ ಶೃಂಗೇರಿ ಶಾರದಾಂಬೆಯ ದೇಗುಲ, ವಿದ್ಯಾಶಂಕರ ದೇವಸ್ಥಾನ, ಸಿರಿಮನೆ ಜಲಪಾತ ಮತ್ತು ಕಿಗ್ಗಾ ಸೇರಿದಂತೆ ಅನೇಕ ಹಲವು ಸ್ಥಳಗಳು ಮಳೆಗಾಲದ ಭೇಟಿಗೆ ಸೂಕ್ತವಾದ ತಾಣಗಳು
ಕರ್ನಾಟಕಕ್ಕೆ ಮಾನ್ಸೂನ್ ಕಾಲಿಡುತ್ತಿದ್ದಂತೆ ತಪ್ಪದೇ ಭೇಟಿ ನೀಡಬೇಕಿರುವ ತಾಣಗಳ ಪೈಕಿ ಪಶ್ಚಿಮ ಘಟ್ಟಗಳ ಹಸಿರು ಹೊದಿಕೆಯ ಮಧ್ಯೆ ನೆಲೆಸಿರುವ ಚಿಕ್ಕಮಗಳೂರು ಜಿಲ್ಲೆ ಪ್ರಮುಖವಾದುದು. ಜಿಲ್ಲೆಯಲ್ಲಿ ಹರಿಯುವ ತುಂಗಾ ನದಿಯ ದಡದಲ್ಲಿರುವ ಶೃಂಗೇರಿ ಶಾರದಾಂಬೆಯ ದೇಗುಲ, ವಿದ್ಯಾಶಂಕರ ದೇವಸ್ಥಾನ, ಸಿರಿಮನೆ ಜಲಪಾತ ಮತ್ತು ಕಿಗ್ಗಾ ಸೇರಿದಂತೆ ಅನೇಕ ಹಲವು ಸ್ಥಳಗಳು ಮಳೆಗಾಲದ ಭೇಟಿಗೆ ಸೂಕ್ತವಾದ ತಾಣಗಳು. ಆದರೆ ಶೃಂಗೇರಿಯ ಭೇಟಿಯ ವೇಳೆ ವಾಸ್ತವ್ಯ ಹೂಡುವುದೆಲ್ಲಿ? ಈ ಪ್ರಶ್ನೆಗೆ ಉತ್ತರವೇ ವಿಲ್ಲಾ ಒಡೆಯರ್ಮಠ್.

ಶೃಂಗೇರಿ..ಶಾರದಾಂಬೆಯ ಸನ್ನಿಧಿ..ಧಾರ್ಮಿಕ ಪ್ರವಾಸಕ್ಕೆ ಸೂಕ್ತವಾದ ತಾಣ.ನದಿಗಳು ಹಾಗೂ ನಿಸರ್ಗ ಸೌಂದರ್ಯದಿಂದ ಪ್ರವಾಸಿಗರನ್ನು ಸದಾ ಆಕರ್ಷಿಸುವ ಈ ತಾಣಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಆದರೆ ಶೃಂಗೇರಿ ಭೇಟಿಗೆ ಒಂದೇ ದಿನ ಸಾಕಾಗೋದಾದರೂ ಹೇಗೆ? ಒಂದೆರಡು ದಿನಗಳ ಕಾಲ ಉಳಿದುಕೊಳ್ಳುವುದಾದರೆ ವಾಸ್ತವ್ಯಕ್ಕೆ ದಿ ಬೆಸ್ಟ್ ಆಯ್ಕೆ ʻವಿಲ್ಲಾ ಒಡೆಯರ್ಮಠ್ʼ. ಶೃಂಗೇರಿ ದೇವಾಲಯದಿಂದ ಸುಮಾರು 15ಕಿಮೀ. ದೂರದಲ್ಲಿರವು ಈ ರೆಸಾರ್ಟ್ ಪ್ರಕೃತಿಯ ಮಡಿಲಿನಲ್ಲಿ ನೆಮ್ಮದಿಯ ವಿಶ್ರಾಂತಿ ಬಯಸುವವರಿಗೆ ಸೂಕ್ತವಾದ ವಾಸ್ತವ್ಯ ತಾಣವಾಗಿದೆ.
ನಗರದ ಗದ್ದಲದಿಂದ ದೂರವಿದ್ದು, ಕಾಫಿ ತೋಟಗಳು, ಗುಡ್ಡಗಳ ನಡುವೆ ನಿರ್ಮಿಸಲಾದ ಈ ವಿಲ್ಲಾ, ಆಧುನಿಕ ಸೌಲಭ್ಯಗಳಷ್ಟೇ ಅಲ್ಲದೆ ಸಾಂಪ್ರದಾಯಿಕ ಆತಿಥ್ಯಕ್ಕೂ ಹೆಸರು ಮಾಡಿದೆ. ವಿಶಾಲವಾದ ಕೊಠಡಿಗಳು, ಸ್ವಚ್ಛವಾದ ವಾತಾವರಣ, ಪ್ರಕೃತಿಯ ನೋಟವನ್ನು ಆಸ್ವಾದಿಸಲೆಂದೇ ನಿರ್ಮಿಸಲಾಗಿರುವ ಸುಂದರವಾದ ಬಾಲ್ಕನಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ವಾರಾಂತ್ಯದ ಪ್ರವಾಸಕ್ಕೆ ಬೆಸ್ಟ್
ನಿತ್ಯದ ಜೀವನಶೈಲಿಯಿಂದ ಹೊರಬಂದು ಹಸಿರಿನ ನಡುವೆ ಆರಾಮವಾಗಿ ಕಳೆಯಬೇಕೆನ್ನುವವರಿಗೆ ಈ ರೆಸಾರ್ಟ್ಗೆ ಭೇಟಿ ನೀಡಿದರೆ ಹೊಸ ಲೋಕವನ್ನು ಪ್ರವೇಶಿಸಿದ ಅನುಭವವಾಗುತ್ತದೆ. ಬೆಳಿಗ್ಗೆ ಪಕ್ಷಿಗಳ ಕಲರವದೊಂದಿಗೆ ದಿನವನ್ನು ಆರಂಭಿಸಿ, ಸಂಜೆ ತಂಪಾದ ಗಾಳಿಯಲ್ಲಿ ಪ್ರಕೃತಿಯ ಸೊಬಗನ್ನು ಸವಿಯುವ ಅನುಭವ ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ವಿಶೇಷವಾಗಿರುತ್ತದೆ. ಕುಟುಂಬದೊಂದಿಗೆ ರಜೆ ಕಳೆಯಲು, ಸ್ನೇಹಿತರೊಂದಿಗೆ ವಾರಾಂತ್ಯದ ಪ್ರವಾಸಕ್ಕೆ ಅಥವಾ ಹನಿಮೂನ್ ಸ್ಪಾಟ್ ಹುಡುಕಾಟದಲ್ಲಿರುವವರಿಗೂ ವಿಲ್ಲಾ ಒಡೆಯರ್ಮಠ ಅತ್ಯುತ್ತಮ ಆಯ್ಕೆಯಾಗಿದೆ.

ಆತಿಥ್ಯ, ಸ್ವಚ್ಛತೆ ಹಾಗೂ ನೆಮ್ಮದಿಗೆ ಆದ್ಯತೆ ನೀಡುವ ವಿಲ್ಲಾ ಒಡೆಯರ್ಮಠ, ಅತಿಥಿಗಳಿಗೆ ಮನೆಯಲ್ಲಿ ಇರುವಂಥ ಆತ್ಮೀಯ ಅನುಭವವನ್ನು ನೀಡಲು ಹೆಸರುವಾಸಿಯಾಗಿದೆ. ಪ್ರಕೃತಿಯ ನಡುವೆ ನೆಮ್ಮದಿಯ ಕ್ಷಣಗಳನ್ನು ಕಳೆಯಲು, ಶೃಂಗೇರಿಯ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸಲು ಮತ್ತು ಆರಾಮದಾಯಕ ವಾಸ್ತವ್ಯದ ಸವಿಯನ್ನು ಪಡೆಯಲು ಬಯಸುವವರು ಈ ತಾಣಕ್ಕೆ ಭೇಟಿ ನೀಡಲೇಬೇಕು.
ಒಟ್ಟಿನಲ್ಲಿ ಒಂದೇ ಪ್ರವಾಸದಲ್ಲಿ ಧಾರ್ಮಿಕ ಕ್ಷೇತ್ರಗಳ ದರ್ಶನ ಹಾಗೂ ಪ್ರಕೃತಿ ಪ್ರವಾಸ ಎರಡನ್ನೂ ಮಾಡಬೇಕೆಂದುಕೊಂಡವರಿಗೆ ಇದಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ.
ಇದನ್ನು ಓದಿ : 700 ವರ್ಷಗಳ ಹಳೆಯ ಕೋಟೆ ಈಗ ರೆಸಾರ್ಟ್ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾ ಕ
ಕಾಫಿ ಕೊಯ್ಲಿನ ಅನುಭವ
ಕಾಫಿ ನಾಡಿಗೆ ಭೇಟಿ ನೀಡಿದ ಮೇಲೆ ಕಾಫಿ ಕೊಯ್ಲಿನ ಅನುಭವವನ್ನು ಪಡೆಯದಿದ್ದರೆ ಹೇಗೆ? ಆದರೆ ಚಿಕ್ಕಮಗಳೂರಿನಲ್ಲಿ ಕಾಫಿ ಕೊಯ್ಲನ್ನು ನೋಡುವ, ಖುದ್ದು ಕಾಫಿ ಕೊಯ್ಲು ಮಾಡುವ ಅವಕಾಶ ಸಿಗುವುದು ಬಲು ಅಪರೂಪ. ಅಂಥದೊಂದು ಅವಕಾಶಕ್ಕಾಗಿ ನೀವು ಕಾಯುತ್ತಿದ್ದರೆ ಕೊಯ್ಲಿನ ಸೀಸನ್ನಲ್ಲಿ ವಿಲ್ಲಾ ಒಡೆಯರ್ಮಠಕ್ಕೆ ಭೇಟಿ ನೀಡಲು ಮರೆಯಲೇಬೇಡಿ.
ಪ್ರವಾಸಿ ಆಕರ್ಷಣೆಗಳೇನು ?
ಶೃಂಗೇರಿ ಶಾರದಾಂಬೆ ದೇವಸ್ಥಾನ - 15 ಕಿಮೀ.
ತುಂಗಾ ನದಿಯ ದಂಡೆ -10 ಕಿಮೀ.
ಸಿರಿಮನೆ ಜಲಪಾತ -16 ಕಿಮೀ.
ಕಿಗ್ಗಾ – 15.3 ಕಿಮೀ.
ವಿಳಾಸ
ವಿಲ್ಲಾ ಒಡೆಯರ್ಮಟ್ ಕೊಚವಲ್ಲಿ, ಕಲ್ಕುಳಿ, ಕೊಚವಲ್ಲಿ, ಕರ್ನಾಟಕ 577139
ಸಂಪರ್ಕ ಸಂಖ್ಯೆ: 07975474329